Advertisement

Kannada Cinema; ತೆರೆಗೆ ಬಂತು ಪ್ರವೀಣ್ ಸಿ.ಪಿ ಅವರ ‘ಎವಿಡೆನ್ಸ್’

03:32 PM May 24, 2024 | Team Udayavani |

ಸಸ್ಪೆನ್ಸ್‌-ಥ್ರಿಲ್ಲರ್‌ “ಎವಿಡೆನ್ಸ್‌’ ಚಿತ್ರ ಇಂದು ತೆರೆಕಾಣುತ್ತಿದೆ. ನಟ, ನಿರ್ದೇಶಕ ಉಪೇಂದ್ರ ಅವರ ಜೊತೆ ಶ್‌.. ಚಿತ್ರದಿಂದ ಉಪೇಂದ್ರ-2 ವರೆಗೂ ಕೆಲಸ ಮಾಡಿದ ಪ್ರವೀಣ್‌ ಸಿ. ಪಿ. ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

ಶ್ರೀಧೃತಿ ಪ್ರೊಡಕ್ಷನ್‌ ಲಾಂಛನದಲ್ಲಿ ಡಾ.ಕೊಡ್ಲಾಡಿ ಸುರೇಂದ್ರ ಶೆಟ್ಟಿ ಅವರು ಅರ್ಪಿಸಿ, ಶ್ರೀನಿವಾಸ್‌ ಪ್ರಭು ಕೆ.ಮಾದೇಶ್‌, ನಟರಾಜ್‌ ಸಿ.ಎಸ್‌ ಅವರ ನಿರ್ಮಾಣದ ಎವಿಡೆನ್ಸ್‌ ಚಿತ್ರಕ್ಕೆ ಅರವಿಂದ್‌ ಅಚ್ಚು, ಎಂ.ಎನ್‌. ರವೀಂದ್ರರಾವ್‌, ಪ್ರಶಾಂತ್‌ ಸಿ.ಪಿ. ರಮೇಶ್‌ ಕೆ, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ಈ ಚಿತ್ರದಲ್ಲಿ ನಾಯಕನಾಗಿ ಜೋಶ್‌ ಖ್ಯಾತಿಯ ರೋಬೊ ಗಣೇಶನ್‌ ಅವರು ನಟಿಸಿದ್ದು, ನಟಿ ಮಾನಸ ಜೋಶಿ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಆಕರ್ಷ್‌ ಆದಿತ್ಯ, ರಚಿತಾ, ಪೂಜಿತ ಬೋಬೆಗೌಡ, ಚಮಕ್ಚಂದ್ರ, ಶಶಿಧರ ಕೋಟೆ, ಮನಮೋಹನ್‌ ರೈ, ಶಿವಕುಮಾರ್‌ ಆರಾಧ್ಯ ನಟಿಸಿದ್ದಾರೆ. ಆರೋನ್‌ ಕಾರ್ತಿಕ್‌ ವೆಂಕಟೇಶ್‌ ಅವರ ಸಂಗೀತ, ರವಿ ಸುವರ್ಣ ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next