Advertisement

ದೇಶಕ್ಕಾಗಿ ಪ್ರತಿಯೊಬ್ಬರು ಚೌಕಿದಾರರಾಗಿ

04:48 PM Apr 01, 2019 | pallavi |
ರಾಯಚೂರು: ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಣೆಗಾಗಿ ಸದಾ ಚೌಕಿದಾರನಾಗಿರುವೆ ಎಂದಿದ್ದು, ಅವರಂತೆ
ದೇಶದ ಪ್ರತಿ ಪಜೆ ಕೂಡ ದೇಶಕ್ಕಾಗಿ ಚೌಕಿದಾರನಾಗಬೇಕು ಎಂದು ಬಿಜೆಪಿ ಸಹ ವಕ್ತಾರ ಶಶಿಲ್‌ ನಮೋಶಿ ಕರೆ ನೀಡಿದರು.
ನಗರದ ಸಂತೋಷಿ ಹೋಮ್‌ಟೇಲ್‌ನಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಜತೆಗೆ ಮೈ ಬಿ ಚೌಕಿದಾರ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಾದ ಕಾರ್ಯಕ್ರಮ ವೀಕ್ಷಣೆಗೆ ಬೃಹತ್‌ ಎಲ್‌ಇಡಿ ಸ್ಕ್ರೀನ್‌ ವ್ಯವಸ್ಥೆ ಮಾಡಲಾಗಿತ್ತು.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ದೇಶದ ಪ್ರಧಾನಿಯನ್ನಾಗಿಸಲು ಕಾರ್ಯಕರ್ತರು ಹೆಚ್ಚು ಶ್ರಮಿಸಬೇಕು. ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ
ಜಾರಿಗೊಳಿಸಿದ ಪ್ರಮುಖ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು ಎಂದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಎಲ್ಲ ನಗರ ಮತ್ತು ಗ್ರಾಮೀಣ ಕ್ಷೇತ್ರದಿಂದ ಆಗಮಿಸಿದ ಕಾರ್ಯಕರ್ತರು,
ಮುಖಂಡರು ಭಾಗಿಯಾಗಿದ್ದರು. ಆದರೆ, ಸಂವಾದದಲ್ಲಿ ಜಿಲ್ಲೆಯ ಕಾರ್ಯಕರ್ತರು ಯಾರಿಗೂ ಮಾತನಾಡಲು ಅವಕಾಶ ಸಿಗಲಿಲ್ಲ.
ಶಿಸ್ತು ಸಮಿತಿ ಮುಖಂಡ ಎನ್‌.ಶಂಕ್ರಪ್ಪ, ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಮಾಜಿ ಶಾಸಕ ಎ.ಪಾಪಾರೆಡ್ಡಿ,
ನಗರ ಘಟಕ ಅಧ್ಯಕ್ಷ ಯು.ದೊಡ್ಡಮಲ್ಲೇಶ, ವಕ್ತಾರ ಶಿವಸಬಪ್ಪ ಮಾಲಿಪಾಟೀಲ, ಅಶೊಕ ಗಸ್ತಿ, ಎ.ಚಂದ್ರಶೇಖರ,
ರವೀಂದ್ರ ಜಲ್ದಾರ್‌, ಶ್ರೀನಿವಾಸರೆಡ್ಡಿ, ಕೆ.ಎಂ.ಪಾಟೀಲ್‌ ಸೇರಿ ಅನೇಕರು ಪಾಲ್ಗೊಂಡಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next