Advertisement
ತಾಲೂಕಿನ ಬೋರಗಿ-ಪುರದಾಳ ಗ್ರಾಮದ ವಿಶ್ವರಾಧ್ಯಮಠದಲ್ಲಿ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳ 50ನೇ ಜನ್ಮದಿನ ಸವಿ ನೆನಪಿಗಾಗಿ ಹಮ್ಮಿಕೊಂಡಿದ್ದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ತಾಯಿಯ ಋಣ ವಿಷಯ ಕುರಿತು ಉಪನ್ಯಾಸ ನೀಡಿದರು.
Related Articles
Advertisement
ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳ 50ನೇ ಜನ್ಮದಿನ ಸವಿನೆನಪಿಗಾಗಿ 50 ದಿನ ವಿವಿಧ ಕಾರ್ಯಕ್ರಮಜರಗುತ್ತವೆ. ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು ಆಶೀರ್ವಚನ ನೀಡುವರು. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವರಾಧ್ಯರ ಹಾಗೂ ಭೀಮಾಶಂಕರ ಮಹಾರಾಜರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯ ತನ್ನ ಮರಣಕ್ಕಿಂತ ಮುಂಚೆ ಈ ಲೋಕದಲ್ಲಿ ಏನನ್ನು ಬಿತ್ತುತ್ತಾನೋ ಅವನ ಮರಣದ ನಂತರ ಪರಲೋಕ ಜೀವನದಲ್ಲಿ ಅದರ ಬೆಳೆ ಕೊಯ್ಯುವನು. ಮನುಷ್ಯರ ಬಗ್ಗೆ ಕರಣುವಿಲ್ಲದವನ ಮೇಲೆ ದೇವರು ಕೂಡಾ ಕರುಣೆ ತೋರುವುದಿಲ್ಲ. ಈ
ಜಗತ್ತಿನಲ್ಲಿ ಮಾನವನಿಗಿರುವ ಎಲ್ಲ ಋಣಗಳ ಪೈಕಿ ತಂದೆ-ತಾಯಿ ಋಣವು ಅತ್ಯಂತ ಮಹತ್ವದ್ದಾಗಿದೆ. ವೃದ್ಧ ತಂದೆ-ತಾಯಿಗಳನ್ನು ನಾವು ನಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು ಎಂದರು. ಮಕ್ಕಳ ಸಾಹಿತಿ ಶಿವಕುಮಾರ ಶಿವಸಿಂಪಿಗೇರ ಮಾತನಾಡಿದರು. ಸಂಗೀತಗಾರರಾದ ತಿಪ್ಪಣ್ಣ ಹೂಗಾರ, ಈರಣ್ಣ ಬಡಿಗೇರ ಸಂಗೀತ ಸೇವೆ ಸಲ್ಲಿಸಿದರು. ಕೆಂಚಪ್ಪ ಸಾಹುಕಾರ, ಡಾ| ನಾನಾಗೌಡ ಪುರದಾಳ, ಡಾ|ಶಿವು ಚಾವರ, ಮುದಕಪ್ಪ ಕೊಟಾರಗಸ್ತಿ, ಸಿದ್ದಯ್ಯಸ್ವಾಮಿ ಪುರದಾಳ, ಚಿದಾನಂದ ಡಂಬಳ, ಹನುಮಂತ ಬಿದರಕುಂದಿ, ಈರನಗೌಡ ಪಾಟೀಲ, ಶಿವಲಿಂಗ ಡಂಬಳ, ವಿಶ್ವದಳದ ಕಾರ್ಯಕರ್ತರು ಹಾಗೂ ಭಕ್ತರು ಇದ್ದರು.