Advertisement
ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್, ನಂಜನಗೂಡಿನ ವಿದ್ಯಾನಗರದಲ್ಲಿ ಬೀದಿನಾಯಿಗಳು ದಾಳಿ ನಡೆಸಿ 5 ರಿಂದ 7 ವರ್ಷ ವಯಸ್ಸಿನ ಐವರು ಮಕ್ಕಳಿಗೆ ತೀವ್ರ ಗಾಯವಾಗಿದ್ದು, ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಲಾಗಿದೆ ಎಂದು ವಿವರಿಸಿದರು.
Related Articles
Advertisement
ಅರ್ಧಂಬರ್ಧ ಮಾಹಿತಿ ಕೊಟ್ರೆ ಸಭೆ ಮಾಡೋಕಾಗಲ್ಲ: ನೀವು ಕೊಡುವ ಶೇಕಡಾವಾರು ಅಂಕಿಅಂಶ ನೋಡೋಕೆ ಕೆಡಿಪಿ ಸಭೆ ಮಾಡುವ ಅವಶ್ಯಕತೆ ಕಾಣಿ¤ಲ್ಲ. ಕೆಡಿಪಿ ಸಭೆಗೆ ಅರ್ಧಂಬರ್ಧ ಮಾಹಿತಿ ಕೊಟ್ರೆ ಹೇಗೆ ಪ್ರಗತಿಪರಿಶೀಲನೆ ಮಾಡೋದು ಎಂದು ಜಿಪಂ ಸಿಇಒ ಕೆ.ಜ್ಯೋತಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಿಂದಿನಿಂದಲೂ ಹೀಗೆ ನಡೆದುಕೊಂಡು ಬರುತ್ತಿದೆ. ಇಲಾಖಾವಾರು ಪ್ರಗತಿ ವರದಿಯನ್ನು ಜಿಪಂಗೆ ಮುಂಚಿತವಾಗಿಯೂ ಕೊಡುವುದಿಲ್ಲ. ಕೊಟ್ಟರು ಅದು ಅರ್ಧಂಬರ್ಧ ಇರುತ್ತದೆ. ಸಭೆಯ ದಿನ ನಿಮ್ಮ ಬಳಿ ಒಂದು ಮಾಹಿತಿ ಇದ್ದರೆ, ನಮ್ಮ ಬಳಿ ಒಂದು ಮಾಹಿತಿ ಇರುತ್ತೆ. ಶೇ.53, ಶೇ.60 ಸಾಧನೆ ಎಂದರೆ ಏನು ಎಂಬ ವಿವರಬೇಕಲ್ಲ? ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ಮುಂದಿನ ಸಭೆಗೆ ತಾಲೂಕುವಾರು ವಿವರವಾದ ಮಾಹಿತಿ ಕೊಡಿ. ಈ ಸಭೆಗೆ ಕೊಟ್ಟಿರುವ ಮಾಹಿತಿಯ ತಾಲೂಕುವಾರು ವಿವರವಾದ ಮಾಹಿತಿಯನ್ನೂ 15 ದಿನಗಳಲ್ಲಿ ಕೊಡಿ, ಮುಂದಿನ ಸಭೆಗೆ ಒಂದು ವಾರ ಮುಂಚಿತವಾಗಿ ಜಿಪಂಗೆ ಸಮಗ್ರವಾದ ಮಾಹಿತಿ ಸಲ್ಲಿಸಬೇಕು ಎಂದು ಜಿಲ್ಲಾಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.