Advertisement
ಬಾರೆಗುಂಡಿ, ಭರ್ಜಡಿಗುಂಡಿ, ಕಕ್ಕೆ ಬೆಟ್ಟು ಮೊದಲಾದ ಪ್ರದೇಶದ ಜನರು ಇದೇ ರಸ್ತೆಯಲ್ಲಿ ಓಡಾಟ ನಡೆಸುತ್ತಾರೆ. ಅರ್ಧ ರಸ್ತೆ ಡಾಮರು, ಇನ್ನರ್ದ ಮಣ್ಣಿನ ರಸ್ತೆಯಿದು. ಆದರೆ ಈಗ ಡಾಮರು ಎದ್ದು ಹೋಗಿ ಹೊಂಡ ಗುಂಡಿ ಸೃಷ್ಟಿಯಾಗಿದೆ. ದೊಡ್ಡತೋಟ, ಮರ್ಕಂಜ ಮೊದಲಾದ ಭಾಗದಿಂದ ಬರುವ ವಾಹನಗಳು ಪೇಟೆಗೆ ಈ ರಸ್ತೆ ಬಳಸುವುದುಂಟು. ಮುಖ್ಯ ರಸ್ತೆಯಿಂದ 10 ನಿಮಿಷ ಮೊದಲೇ ಇಲ್ಲಿ ತಲುಪಬಹುದು. ಹಾಗಾಗಿ ಇದು ಸಂಚಾರದ ಸಮಯ ಉಳಿತಾಯದಲ್ಲಿಯು ಅನುಕೂಲ ರಸ್ತೆ. ಹಲವಾರು ವಿದ್ಯಾರ್ಥಿಗಳು ಈ ರಸ್ತೆಯನ್ನೇ ಬಳಸಿದ್ದಾರೆ. ಇಷ್ಟಾದರೂ, ಸಂಪರ್ಕ ರಸ್ತೆಯ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.
ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ತಿ ಆಗಿಲ್ಲ. ಈ ಮಳೆಗಾಲದಲ್ಲಂತೂ ಇದರ ಗೋಳು ಹೇಳ ತೀರದು. ಜಲ್ಲಿ ರಾಶಿ ಹಾಕಿದ್ದು, ಕಾಮಗಾರಿ ಆರಂಭವಾಗಿಲ್ಲ.
– ಚಂದ್ರಹಾಸ, ಕಿಲಾರುಕಜೆ
ಸ್ಥಳೀಯ ನಿವಾಸಿ