Advertisement

‘ಆ ದೇವರಿಂದಲೂ ನನ್ನನ್ನು ಹಿಡಿಯಲಾಗುವುದಿಲ್ಲ’ಎಂದ ಆರೋಪಿಯನ್ನು ಜೈಲಿಗಟ್ಟಿದ ಪೊಲೀಸರು

08:16 PM Feb 06, 2021 | Team Udayavani |

ಮುಂಬೈ: ಪೊಲೀಸರನ್ನು ಬಿಡಿ, ಆ ದೇವರಿಂದಲೂ ನನ್ನನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ ವ್ಯಕ್ತಿಯನ್ನು ಪೊಲೀಸರು ಹಿಡಿದು ಕಂಬಿಹಿಂದೆ ಕಳುಹಿಸಿದ ಘಟನೆ ಮುಂಬೈ ನಲ್ಲಿ ನಡೆದಿದೆ.

Advertisement

26 ವರ್ಷದ ಪಪ್ಪು ಹರಿಶ್ಚಂದ್ರ ಅಲಿಯಾಸ್ ಕೋಪ್ಡಿ ಎಂಬಾತನೇ ಮುಂಬೈ ಪೊಲೀಸರಿಗೆ ಸವಾಲು ಹಾಕಿ ಜೈಲು ಸೇರಿದವನು. ಕೋಪ್ಡಿ ವಿರುದ್ದ ಮುಂಬೈ, ಪೋವಯ್‍, ಸಾಕಿ ನಕಾ, ಎಂಐಡಿಸಿ ಸೇರಿದಂತೆ  ಹಲವಾರು ಠಾಣೆಗಳನ್ನು 12 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಪೋವಯ್ ನಿವಾಸಿಯಾಗಿರುವು ಈತ 2013 ರಿಂದಲೂ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಣ್ಮರೆಯಾಗಿದ್ದ. ಮಾತ್ರವಲ್ಲದೆ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ, ಪೊಲೀಸರಿಗೆ ಮಾತ್ರವಲ್ಲ, ಆ ದೇವರಿಗೂ ನನ್ನನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದ.

ಇದನ್ನೂ ಓದಿ:  Backward Body skip ಮಾಡುವ ಮೂಲಕ 6ನೇ ವಿಶ್ವದಾಖಲೆ ನಿರ್ಮಿಸಿದ ತನುಶ್ರೀ ಪಿತ್ರೋಡಿ

ಆರೋಪಿಯು ಪೊಲೀಸರಿಗೆ ಸವಾಲೆಸೆದಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ  ರಾಯಲ್ ಪಾಮ್ ನಲ್ಲಿ ಕೋಪ್ಡಿಯು ದರೋಡೆ ಮಾಡಲು ಸಂಚು ರೂಪಿಸಿದ್ದಾನೆ ಎಂಬ ಸುಳಿವೊಂದು ದೊರಕಿತು.

ಕೂಡಲೇ ಆತನ ಬಂಧನಕ್ಕೆ ಬಲೆ ಬೀಸಿ ಸೆರೆಹಿಡಿಯಲಾಗಿದೆ. ಈ ವೇಳೆ ಒಂದು ಪಿಸ್ತೂಲ್ ಅನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಉಲ್ಲಾಸ್ ಕೋಲಾಮ್ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:   ರೈತರ ಪ್ರತಿಭಟನೆ: ದೆಹಲಿಯ ಸಿಂಘು, ಟಿಕ್ರಿ ಗಡಿ ಪ್ರದೇಶಗಳಲ್ಲಿ ಮತ್ತೆ ಇಂಟರ್ನೆಟ್ ಸ್ಥಗಿತ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next