Advertisement

ಮೋದಿ ಆರ್ಥಿಕತೆ ನಿರ್ವಹಣೆಯನ್ನು ಟೀಕಾಕಾರರೂ ಒಪ್ಪಿಕೊಂಡಿದ್ದಾರೆ : ಬಿಜೆಪಿ

03:22 PM Jul 31, 2022 | Team Udayavani |

ನವದೆಹಲಿ: ”ಆರ್ಥಿಕತೆಯನ್ನು ನಿಭಾಯಿಸಲು ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಸರಿಯಾಗಿವೆ, ಟೀಕಾಕಾರರೂ ಸಹ ಅದನ್ನು ಒಪ್ಪಿಕೊಂಡಿದ್ದಾರೆ’ ಎಂದು ಬಿಜೆಪಿ ಭಾನುವಾರ ಹೇಳಿದೆ.

Advertisement

ಬಿಜೆಪಿ ವಕ್ತಾರ ಸೈಯದ್ ಜಾಫರ್ ಇಸ್ಲಾಂ, ”ಸರ್ಕಾರದ ವಿಮರ್ಶಕರು ಕೂಡ ಅದರ ನೀತಿಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ” ಎಂದರು.

ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕೆ ಬಂದಂತಹ ಸಮಸ್ಯೆಗಳನ್ನು ಭಾರತ ಎದುರಿಸುತ್ತಿಲ್ಲ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ ಒಂದು ದಿನದ ನಂತರ ಸೈಯದ್ ಅವರು ಈ ಹೇಳಿಕೆ ನೀಡಿದ್ದು, ”ಭಾರತ ಸಾಕಷ್ಟು ಫಾರೆಕ್ಸ್ ಮೀಸಲು ಹೊಂದಿದೆ ಮತ್ತು ಅದರ ವಿದೇಶಿ ಸಾಲ ಕೂಡ ತುಲನಾತ್ಮಕವಾಗಿ ಕಡಿಮೆಯಾಗಿದೆ” ಎಂದರು.

”ಪ್ರಪಂಚವು ಹಣದುಬ್ಬರ ಮತ್ತು ಇತರ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವಾಗ ಭಾರತದ ಆರ್ಥಿಕತೆಯು  ಟ್ರ್ಯಾಕ್‌ನಲ್ಲಿದೆ ವೇಗದಲ್ಲಿ ಸಾಗುತ್ತಿದೆ ಎಂದು ಜಗತ್ತು ಒಪ್ಪಿಕೊಂಡಿದೆ. ಭಾರತದ ಆರ್ಥಿಕತೆಯು ಪ್ರಬಲವಾಗಿದೆ. ನಮ್ಮನ್ನು ಟೀಕಿಸುವವರೂ ಅದನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next