Advertisement

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

01:20 AM Apr 29, 2024 | Team Udayavani |

ಮುಂಬಯಿ: ಬಾಲಿವುಡ್‌ನ‌ ಖ್ಯಾತ ನಟ ಅಮೀರ್‌ ಖಾನ್‌ “ನಮಸ್ತೆ’ಯ ಮಹತ್ವ ಬಗ್ಗೆ ಮಾತನಾಡಿದ್ದಾರೆ. ಕಪಿಲ್‌ ಶರ್ಮಾ ಅವರ “ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ’ನಲ್ಲಿ ಭಾಗವಹಿಸಿದ್ದ ಅಮೀರ್‌ ಖಾನ್‌, “ದಂಗಲ್‌’ ಚಿತ್ರಕ್ಕಾಗಿ ಪಂಜಾಬ್‌ಗ ಹೋದಾಗ ನಮಸ್ತೆಗಿರುವ ಶಕ್ತಿ, ಮಹತ್ವ ತಿಳಿಯಿತು ಎಂದು ಹೇಳಿಕೊಂಡಿದ್ದಾರೆ. ಪಂಜಾಬ್‌ನಲ್ಲಿ ಚಿತ್ರೀಕರಣಕ್ಕಾಗಿ ಬೆಳಗ್ಗೆ ಹಳ್ಳಿಗೆ ಹೋದಾಗ ಜನರು ಕೈ ಮುಗಿದು ನಿಂತುಕೊಂಡು ನನ್ನನ್ನು ಸ್ವಾಗತಿಸುತ್ತಿದ್ದರು. ಸಂಜೆ ಚಿತ್ರೀಕರಣ ಮುಗಿದು ವಾಪಸ್‌ ಹೋಗುವಾಗಲೂ ಜನರು ಕೈ ಮುಗಿದು ಬಿಳ್ಕೊಡುತ್ತಿದ್ದರು. ನಾನು ಮುಸ್ಲಿಮನಾಗಿದ್ದರೂ ನನಗೆ ನಮಸ್ತೆ ಮಹತ್ವ ಗೊತ್ತಾಯಿತು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next