Advertisement

Eshwarappa ಒಬ್ಬ ಒಳ್ಳೆಯ ನಟ: ಆಯನೂರು ಮಂಜುನಾಥ್‌

12:14 AM Mar 20, 2024 | Shreeram Nayak |

ಶಿವಮೊಗ್ಗ: ಮಾಜಿ ಸಚಿವ ಈಶ್ವರಪ್ಪ ರಾಜಕೀಯದಲ್ಲಿ ಒಬ್ಬ ಒಳ್ಳೆ ನಟ. ನಟರು ಮುಖಕ್ಕೆ ಬಣ್ಣ ಹಚ್ಚಿದರೆ, ಈಶ್ವರಪ್ಪ ನಾಲಿಗೆಗೆ ಬಣ್ಣ ಹಚ್ಚಿಕೊಂಡಿದ್ದಾರೆ. ಅವರಿಗೆ ರಾಜಕೀಯ ಗುಂಡಿಗೆ ಇಲ್ಲ. ಅವರ ಹಿಂದೆ ಕೆಲವು ಬ್ಯಾಟರಿಗಳಿವೆ. ಅವು ಕೆಲವು ದಿನ ಉರಿಯುತ್ತವೆ. ಅವು ನಿಂತ ಮೇಲೆ ಈಶ್ವರಪ್ಪ ಕೂಡಾ ಸುಮ್ಮನಾಗುತ್ತಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪ ಹಿಂದುಳಿದವರ ಹೆಸರಲ್ಲಿ ಅತೀ ಹೆಚ್ಚು ಲಾಭ ಮಾಡಿಕೊಂಡರು. ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಭರವಸೆ ಇಲ್ಲ. ಯಡಿಯೂರಪ್ಪ ಬಗ್ಗೆ ಈಶ್ವರಪ್ಪ ಕೀಳಾಗಿ ಮಾತನಾಡುತ್ತಿದ್ದಾರೆ. ಅವರ ರಾಜಕೀಯ ಉತ್ತರಾಧಿಕಾರಿಗಳಾದ ಮಕ್ಕಳು ಕೂಡಾ ತಮ್ಮ ತಂದೆ ವಿರುದ್ಧ ಅಸಂಬದ್ಧ ಮಾತನಾಡುವ ಈಶ್ವರಪ್ಪ ಅವರನ್ನು ಖಂಡಿಸದಿರುವುದು ದುರಂತವೇ ಸರಿ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next