Advertisement

ಎರ್ಮಾಯ್‌ ಫಾಲ್ಸ್‌:ಚಿತ್ರ ನಿರ್ದೇಶಕ ಸಂತೋಷ್‌ ಶೆಟ್ಟಿ ನೀರು ಪಾಲು 

12:52 PM May 30, 2018 | Team Udayavani |

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮಹಾ ಮಳೆಗೆ ಇನ್ನೊಂದು ಬಲಿಯಾಗಿದ್ದು  ಎರ್ಮಾಯ್‌ ಫಾಲ್ಸ್‌ನಲ್ಲಿ  ಫೋಟೋ ಶೂಟ್‌ಗೆಂದು ತೆರಳಿದ್ದ ಯುವ ಚಿತ್ರ ನಿರ್ದೇಶಕ ರೊಬ್ಬರು  ಬುಧವಾರ ಬೆಳಗ್ಗೆ ನೀರು ಪಾಲಾಗಿದ್ದಾರೆ. 

Advertisement

ಕನಸು ಎಂಬ ಚಿತ್ರ ನಿರ್ದೇಶಿಸಿದ್ದ ಸಂತೋಷ್‌ ಶೆಟ್ಟಿ ಕಟೀಲು ಎನ್ನುವವರು  4 ಜನರ ತಂಡ ದೊಂದಿಗೆ ಜಲಪಾತಕ್ಕೆ ಫೋಟೋ ಶೂಟ್‌ಗೆ ಆಗಮಿಸಿದ್ದು, ಈ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ತೆರಳಿ ಸಂತೋಷ್‌ ಅವರ ಶವವನ್ನು ಮೇಲಕ್ಕೆತ್ತಿದ್ದಾರೆ. 

ದುರ್ಗಮ ಪ್ರದೇಶವಾದುದರಿಂದ ಪೊಲೀಸರು ಮತ್ತು  ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ತೆರಳುವುದು ತಡವಾಯಿತು. 

Advertisement

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next