Advertisement

BJP ಬಿಟ್ಟು ಬರಲು ಎಂಟೆದೆ ಬೇಕು:ಕಾಂಗ್ರೆಸ್‌ ಅಭ್ಯರ್ಥಿ ಎನ್‌.ವೈ. ಗೋಪಾಲಕೃಷ್ಣ

09:20 PM Apr 08, 2023 | Team Udayavani |

ನಾಯಕನಹಟ್ಟಿ: ಬಿಜೆಪಿ ಬಿಡುವುದು ಅತ್ಯಂತ ಕಷ್ಟದ ಕೆಲಸ. ಆ ಪಕ್ಷದಿಂದ ಹೊರಬರಲು ಎಂಟೆದೆ ಬೇಕು ಎಂದು ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ವೈ. ಗೋಪಾಲಕೃಷ್ಣ ಹೇಳಿದರು.

Advertisement

ಶನಿವಾರ ನೇರಲಗುಂಟೆ ಗ್ರಾಮದಲ್ಲಿ ಏರ್ಪಡಿಸಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸ್ವಕ್ಷೇತ್ರ ಮೊಳಕಾಲ್ಮೂರು ಅಭಿವೃದ್ಧಿಯ ಉದ್ದೇಶಕ್ಕಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದೇನೆ. ಬಿಜೆಪಿಯಿಂದ ಹೊರಬರುವುದು ಅಷ್ಟು ಸುಲಭವಾಗಿರಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಸೇರಿ ಹಲವಾರು ಮುಖಂಡರು ಪಕ್ಷ ಬಿಡದಂತೆ ಒತ್ತಡ ಹಾಕಿದ್ದರು.

ರಾಷ್ಟ್ರೀಯ ಮುಖಂಡರು ಕೂಡ ಪಕ್ಷ ತ್ಯಜಿಸದಂತೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಶಿರಸಿಯಲ್ಲಿದ್ದ ಸ್ಪೀಕರ್‌ ಮನೆಗೆ ತೆರಳಿ ರಾಜೀನಾಮೆ ನೀಡುವವರೆಗೂ ನನ್ನ ಮೇಲೆ ಅತ್ಯಂತ ಹೆಚ್ಚಿನ ಒತ್ತಡವಿತ್ತು. ಆದರೆ ಇದನ್ನು ಮೀರಿ ದೃಢ ನಿರ್ಧಾರ ಕೈಗೊಂಡೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರೀತಿ-ವಿಶ್ವಾಸಕ್ಕೆ ಕಟ್ಟು ಬಿದ್ದು ಮಾತೃಪಕ್ಷಕ್ಕೆ ಬಂದಿದ್ದೇನೆ. ನಾನು ಬಿಜೆಪಿಗೆ ಸೇರ್ಪಡೆಯಾದಾಗ ಇಲ್ಲಿನ ಯಾವುದೇ ಮುಖಂಡರು ಅಥವಾ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿಲ್ಲ. ಒಂಟಿಯಾಗಿ ಹೋಗಿ ಪುನಃ ಪಕ್ಷಕ್ಕೆ ಮರಳಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next