Advertisement

ಚಿಕ್ಕಮಗಳೂರು: ಭದ್ರಾ ವನ್ಯಜೀವಿ ವಿಭಾಗದಲ್ಲಿ ಮೋಜು ಮಸ್ತಿ -ಅರಣ್ಯ ಇಲಾಖೆ ಮೌನಕ್ಕೆ ಆಕ್ಷೇಪ

11:55 AM Jan 15, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ವನ್ಯಜೀವಿ ವಿಭಾಗದ ಅನೇಕ ಪ್ರದೇಶಗಳಲ್ಲಿ ಪ್ರವಾಸಿಗರು ಮೋಜುಮಸ್ತಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಮತ್ತು ಪರಿಸರವಾದಿಗಳು ಮೌನವಾಗಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ .

Advertisement

ಭದ್ರಾ ವನ್ಯಜೀವಿ ವಿಭಾಗದ, ತಣಿಗೆ ಬೈಲು ವಲಯದ ಕೆಮ್ಮಣುಗುಂಡಿ ಸೆಕ್ಷನ್, ಶಾಂತವೇರಿ ಕಳ್ಳ ಬೇಟೆ ತಡೆ ಶಿಬಿರದ ಬಳಿ ಪ್ರವಾಸಿಗರ ಮೋಜು ಮಸ್ತಿ ನಿರಂತರವಾಗಿ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ

ಅಭಯಾರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಖಾಸಗಿ ಮೋಟಾರ್ ಬೈಕ್ ಗಳಲ್ಲಿ ಪ್ರವಾಸಿಗರು ಎಗ್ಗಿಲ್ಲದೆ ಸಂಚಾರ ಮಾಡುತ್ತಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ .

ಅರಣ್ಯ ಇಲಾಖೆಯ ವನ್ಯಜೀವಿ  ವಿಭಾಗದ  ಸಿಬ್ಬಂದಿ / ಅಧಿಕಾರಿಗಳು  ಈ ನಿಟ್ಟಿನಲ್ಲಿ  ಮುತುವರ್ಜಿ ವಹಿಸಿ ಮೋಜು ಮಸ್ತಿಗೆ ಬ್ರೇಕ್ ಹಾಕುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next