Advertisement

ಎಂಜನಿಯರ್‌ ಚಿತ್ತ ಸಾವಯವದತ್ತ

05:39 PM Jun 19, 2017 | Harsha Rao |

ವೃತ್ತಿಯಿಂದ ಸಾಪ್ಟ್ವೇರ್‌ ಎಂಜನಿಯರ್‌. ಬಿಡುವಿನ ವೇಳೆಯಲ್ಲಿ ಈ ನಾಗರಾಜ್‌ ಖುಷಿ ಪಡುವುದು ತಮ್ಮ ಹೆಸರುಘಟ್ಟದ ಸಾವಯವ ತರಕಾರಿ ತೋಟದಲ್ಲಿ.  ಬೆಂಗಳೂರಿನ ತಮ್ಮ ಮನೆಯಿಂದ 20ಕಿ.ಮೀ ದೂರದಲ್ಲಿದೆ ತೋಟ. ನಾಗರಾಜ್‌ ಅವರದು ನಾಲ್ಕು ಎಕರೆ ತೋಟ. 

Advertisement

ನಾಗರಾಜ್‌ ಅವರು ಮೂಲತ ಕೃಷಿ ಕುಟುಂಬದಿಂದ ಬರದೇ ಇದ್ದರೂ ತಮ್ಮ ಕಾಲೇಜು ಜೀವನದಲ್ಲಿಯೇ ಬೇರೆಯವರ ಭೂಮಿಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಂಡು ಕೃಷಿ ಮಾಡುತ್ತಿದ್ದರು.  ಬಿ.ಎಸ್‌.ಸಿ ಕೃಷಿ ಪದವಿ ಮಾಡಬೇಕೆಂಬ ಕನಸನ್ನು ಹೊತ್ತರೂ ಅದು ಫ‌ಲಿಸದೇ  ಬಿ.ಇ ಪದವಿ ಮುಗಿಸಿ ಬೆಂಗಳೂರಲ್ಲಿ ಎಂಜನೀಯರ್‌ ಆಗಿ ಕಳೆದ 4 ವರ್ಷದಿಂದ ಸಾವಯವ ಕೃಷಿ ಮಾಡುತ್ತಿದ್ದಾರೆ. ನಾಗರಾಜ್‌ ವಾರದಲ್ಲಿ ಶನಿವಾರ ಒಂದು ದಿನ ಪೂರ್ತಿ ಹಾಗೂ ನಿತ್ಯ ಬೆಳಗ್ಗೆ ಒಂದು ಗಂಟೆಗಳ ಕಾಲ ಫಾರ್ಮ್ನಲ್ಲಿ ನೀರು ಹರಿಸುತ್ತಾರೆ. ಕಳೆ ಕೀಳುವ ಕೆಲಸದಲ್ಲಿ ತಲ್ಲೀನರಾಗುತ್ತಾರೆ.  4 ಎಕರೆಯಲ್ಲಿ 1,000 ಹೂಕೋಸು, ಒಂದೂವರೆ ಎಕರೆಯಲ್ಲಿ ಬೆಂಡೆ, ಟೊಮೆಟೊ, ದೊಡ್ಡ ಮೆಣಸಿನಕಾಯಿ, ಉಳಿದಂತೆ ಕ್ಯಾರೆಟ್‌, ಹಾಗಲಕಾಯಿ, ಹೀರೆಕಾಯಿ, ನುಗ್ಗೆಕಾಯಿ, ಉರುಳಿಕಾಯಿ ,ಮೆಂತ್ಯ ಹಾಗೂ ದಂಟಿನ ಸೊಪ್ಪು, ಕೊತ್ತಂಬರಿ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.  ವರ್ಷಕ್ಕೆ ಖರ್ಚು ಎಲ್ಲಾ ಖರ್ಚು ತೆಗೆದರೂ 2 ಲಕ್ಷ ರೂಗಳ ನಿವ್ವಳ ಆದಾಯ.

ಕಳೆದ ಐದು ವ‚ರ್ಷಗಳಿಂದ ಬಾದಾಮಿ, ಮಲ್ಲಿಕಾ, ರಸಪುರಿ  200 ಮಾವು, 15 ಸಪೊಟಾ, 5 ಸೀತಾಫ‌ಲ, 20 ನುಗ್ಗೆ, 10 ಹಲಸು, 7 ನೆಲ್ಲಿ ಗಿಡಗಳನ್ನು ಬೆಳೆಯುತ್ತಿದ್ದಾರೆ. ಎಲ್ಲ ಹಣ್ಣುಗಳ ಫ‌ಸಲಿನಿಂದ ವರ್ಷಕ್ಕೆ 2 ಲಕ್ಷ ರೂ. ಆದಾಯ ಬರುತ್ತಿದೆ. ಮಾವು ಫ‌ಸಲು ಬರುವ ಸಂದರ್ಭದಲ್ಲಿ ಕುಂಬಳ ಬೆಳೆ ಬೆಳೆಯುತ್ತಾರೆ.

ಎರಡು ಸೀಮೆ ಹಸುವಿನಿಂದ ಬೆಳಗ್ಗೆ ಸಂಜೆ 10 ಲೀಟರ್‌ ಹಾಲು ನೀಡುತ್ತಿದೆ.  ಇದರಿಂದ ತಿಂಗಳಿಗೆ 30 ಸಾವಿರ ರೂಗಳ ಆದಾಯ ದೊರೆಯುತ್ತಿದೆ.

ಜೊತೆಗೆ ಸಗಣಿ, ಅರಿಷಿಣ, ಗಂಜಲಾ ಹಾಗೂ ಬೇವಿನೆಣ್ಣೆಗಳನ್ನು ಸೇರಿಸಿ ಜೀವಾಮೃತ ತಯಾರಿಸುತ್ತಾರೆ.  ಗಿಡ ಚಿಕ್ಕದಿದ್ದಾಗ, ಹೂ ಬಿಡುವ ಸಮಯದಲ್ಲಿ ಹಾಗೂ ಕಾಯಿ ಬಿಡುವ ಸಂದರ್ಭದಲ್ಲಿ ಜೀವಾಮೃತ ಹೊರತು ಪಡಿಸಿ ಯಾವುದೇ ರಾಸಾಯನಿಕ ಔಷಧಗಳನ್ನು ಸಿಂಪಡಿಸುವುದಿಲ್ಲ. ಮೂರು ಇಂಚಿನ ಬೋರವೆಲ್‌ ನಿಂದ ಎರಡು ದಿನಕ್ಕೊಮ್ಮೆ ನೀರು ಹಾಯಿಸುತ್ತಾರೆ.  

Advertisement

ಇನ್ನೊಂದು ವಿಶೇಷ ಎಂದರೆ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ದೊಡ್ಡ ಬೆಲೆಗೆ ಮಾರಾಟ ಮಾಡಬಹುದಿತ್ತು. ಆದರೆ ಇವರು ಬೆಂಗಳೂರಿನ ವಿದ್ಯಾರಣ್ಯಪುರದ ಅಪಾರ್ಟ್‌ಮೆಂಟ್‌ಗಳ ಸುಮಾರು 100 ಮಧ್ಯಮ ವರ್ಗ ಕುಟುಂಬಗಳಿಗೆ ಹಾಪ್‌ ಕಾಮ್ಸ್‌ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ವ್ಯಾಟ್ಸ್‌ ಆಫ್ ಗುಂಪು ಸಹ ಮಾಡಿಕೊಂಡಿದ್ದಾರೆ.  “ಮಧ್ಯಮ ವರ್ಗದ ಜನರಿಗೆ ವಿಷರಹಿತ ಶುದ್ಧ ತರಕಾರಿ ಹಾಗೂ ಹಣ್ಣು ತಲುಪಿಸುವ ಮಹಾದಾಸೆ ನನ್ನದು’ ಎನ್ನುತ್ತಾರೆ ನಾಗರಾಜ್‌. 

– ಗುರುರಾಜ.ಬ.ಕನ್ನೂರ.ಆರೂಢನಂದಿಹಾಳ.

Advertisement

Udayavani is now on Telegram. Click here to join our channel and stay updated with the latest news.

Next