Advertisement

Puttur: ವಿದೇಶದಲ್ಲಿ ಆತ್ಮಹತ್ಯೆ; ಪುತ್ತೂರಿಗೆ ಮೃತದೇಹ

08:17 PM Jul 27, 2024 | Team Udayavani |

ಪುತ್ತೂರು: ಮೂರು ತಿಂಗಳ ಹಿಂದೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿ ಜು. 11ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಕಲ್ಲೇಗ ಅಜೇಯ ನಗರ ನಿವಾಸಿ ಸುಲೋಚನಾ ಅವರ ಪುತ್ರ ಭರತ್‌ ಕುಮಾರ್‌ (44) ಅವರ ಮೃತದೇಹವನ್ನು ಪುತ್ತೂರಿಗೆ ತರಲಾಗಿದ್ದು ಜು. 26ರಂದು ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು.

Advertisement

ಭರತ್‌ ಆತ್ಮಹತ್ಯೆ ಮಾಡಿಕೊಂಡಿಲ್ಲ ಇದೊಂದು ಸಂಶಯಾಸ್ಪದ ಸಾವು, ನನಗೆ ನ್ಯಾಯ ಒದಗಿಸಿಕೊಡುವಂತೆ ಮತ್ತು ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸಿಕೊಡುವಂತೆ ಭರತ್‌ ಅವರ ತಾಯಿ ಸುಲೋಚನಾ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದರು. ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರಿಗೂ ಮನವಿ ಸಲ್ಲಿಸಿದ್ದರು.

ಜು. 26ಕ್ಕೆ ಭರತ್‌ ಅವರ ಮೃತದೇಹವನ್ನು ವಿಮಾನದಲ್ಲಿ ಮಂಗಳೂರಿಗೆ ಕಳುಹಿಸಿ ಅಲ್ಲಿಂದ ಆ್ಯಂಬುಲೆನ್ಸ್‌ ಮೂಲಕ ಪುತ್ತೂರಿಗೆ ತರಲಾಯಿತು. ಮೃತರ ಸಾವಿಗೆ ಸಂಬಂಧಿಸಿ ಮರಣ ಪ್ರಮಾಣಪತ್ರದಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಇಲ್ಲ ಎಂದು ಮನೆ ಮಂದಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next