Advertisement

ಎಂಡೋಸಲ್ಫಾನ್‌ ನಿಷ್ಕ್ರಿಯ ಪ್ರಕ್ರಿಯೆ ಆರಂಭ

09:50 AM Mar 20, 2018 | Karthik A |

ಕಾಸರಗೋಡು: ಜಿಲ್ಲೆಯ ಪ್ಲಾಂಟೇಶನ್‌ ಕಾರ್ಪೋರೇಶನ್‌ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿರುವ ಎಂಡೋಸಲ್ಫಾನ್‌ ಕೀಟನಾಶಕವನ್ನು ನಿಷ್ಕಿೃಯಗೊಳಿಸಲು ಪ್ರಕ್ರಿಯೆ ಆರಂಭಿಸಲಾಗಿದೆ. ಈ ಕೀಟನಾಶಕದ ಈಗಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಸ್ಯಾಂಪಲ್‌ಲ್ಯಾಬ್‌ಗಳಿಗೆ ಕಳುಹಿಸಿಕೊಡಲಾಗಿದೆ. ಪೆರಿಯ, ರಾಜಪುರಂ, ಚೀಮೇನಿ ಪ್ಲಾಂಟೇಶನ್‌ ಕಾರ್ಪೋರೇಶನ್‌ನ  ಗೋದಾಮುಗಳಲ್ಲಿ ಕೀಟನಾಶಕವನ್ನು ಸಂಗ್ರಹಿಸಿಡಲಾಗಿದೆ.

Advertisement

ಪ್ಲಾಂಟೇಶನ್‌ ಕಾರ್ಪೋರೇಶನ್‌ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿರುವ ಎಂಡೋಸಲ್ಫಾನ್‌ ಕೀಟನಾಶಕವನ್ನು 2012ರಲ್ಲಿ ಸುರಕ್ಷಿತವಾದ ಬ್ಯಾರಲ್‌ಗ‌ಳಲ್ಲಿಟ್ಟು ಅದೇ ಗೋದಾಮಿನಲ್ಲಿರಿಸಲಾಗಿತ್ತು. ಬ್ಯಾರಲ್‌ನಲ್ಲಿ ಗರಿಷ್ಠ ಐದು ವರ್ಷ ಮಾತ್ರ ಸಂಗ್ರಹಿಸಿಡಬಹುದೆಂಬುದರಿಂದಾಗಿ ಈಗಿನ ಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಪರಿಶೀಲನೆಗಾಗಿ ಲ್ಯಾಬ್‌ ಗೆ ಕಳುಹಿಸಿಕೊಡಲಾಗಿದೆ. ಲ್ಯಾಬ್‌ ವರದಿ ಸಿಕ್ಕ ತತ್‌ಕ್ಷಣ ಕೀಟನಾಶಕ ನಾಶಪಡಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next