Advertisement

ಹರ್ಷ ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿ: ವಿಶ್ವಸಂತೋಷ ಭಾರತೀ ಶ್ರೀ

03:02 PM Feb 22, 2022 | Team Udayavani |

ಶಿವಮೊಗ್ಗ: ಇಲ್ಲಿನ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ತೀರ್ಥಹಳ್ಳಿ ಬೆಜ್ಜವಳ್ಳಿ ಮಠದ ಡಾ. ವಿಶ್ವಸಂತೋಷ ಭಾರತೀ ಶ್ರೀ ಗುರೂಜಿ ಒತ್ತಾಯ ಮಾಡಿದ್ದಾರೆ.

Advertisement

ಶಿವಮೊಗ್ಗದ ಹರ್ಷ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆರೋಪಿಗಳಿಗೆ ಬೇರೆ ಶಿಕ್ಷೆ ಬೇಡ, ಎನ್ ಕೌಂಟರ್ ಮಾಡಿ‌. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌‌ ಗೆ ಸಾಧ್ಯವಾಗುವುದು ಇವರಿಗೆ ಯಾಕೆ ಆಗುವುದಿಲ್ಲ? ಇಲ್ಲಿನ ಗುಂಡು ಅಪರಾಧಿಗಳ ಒಳಗೆ ಹೋಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ‌ಯವರನ್ನು ಭೇಟಿ ಮಾಡಿದ್ದೇನೆ.  ಒಂದು ಕೋಟಿ‌ ಪರಿಹಾರ ಕೊಡುವಂತೆ ಮನವಿ ಮಾಡಿದ್ದೇನೆ. ಹಿಂದೆ ಸರ್ಕಾರ ಹಸು ಕಳ್ಳನಿಗೆ 25 ಲಕ್ಷ ಪರಿಹಾರ ಕೊಟ್ಟಿದೆ. ಬಿಜೆಪಿಯ ಎಲ್ಲಾ ಶಾಸಕರು, ಸಂಸದರು, ಎಂ‌ಎಲ್‌ಸಿಗಳು ಪರಿಹಾರ ನೀಡಬೇಕು. ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸಂತೋಷ್ ಗುರೂಜಿ ಒತ್ತಾಯಿಸಿದರು.

ಇದನ್ನೂ ಓದಿ:ಶಿವಮೊಗ್ಗ : ನಿಷೇಧಾಜ್ಞೆಯ ನಡುವೆಯೂ ಕಿಡಿಗೇಡಿಗಳಿಂದ ಮೂರು ವಾಹನಗಳಿಗೆ ಬೆಂಕಿ

ಜೈಲಿನಲ್ಲಿ ಬಿರಿಯಾನಿ: ಕೊಲೆ ಮಾಡಿದವರಿಗೆ ಜೈಲಿನಲ್ಲಿ ಬಿರಿಯಾನಿ, ಟಿವಿ ವ್ಯವಸ್ಥೆ ಮಾಡಲಾಗುತ್ತದೆ. ಈ ಹಿಂದೆಯೂ ಶಿವಮೊಗ್ಗದಲ್ಲಿ ಹಲವು ಕೊಲೆ ನಡೆದಿದೆ. ಜೈಲಿಗೆ ಹೋದವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಸ್ವಲ್ಪ ದಿನದಲ್ಲೇ ಜಾಮೀನಿನ ಮೇಲೆ ಹೊರ ಬರುತ್ತಾರೆ. ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿರುವವರೇ ಟಾರ್ಗೆಟ್ ಮಾಡಿ ಕೊಲೆ ಮಾಡಲಾಗುತ್ತಿದೆ ಎಂದು ಸಂತೋಷ್ ಗುರೂಜಿ ಗಂಭೀರ ಆರೋಪ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next