Advertisement

100 ಮೀಟರ್ ಎತ್ತರದ ಚಿಮಿಣಿ ಏರಿ ನೌಕರರ ಪ್ರತಿಭಟನೆ

01:50 PM Jul 19, 2021 | Team Udayavani |

ಮಂಡ್ಯ: ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿ ಇಬ್ಬರು ನೌಕರರು‌ ಪಿಎಸ್ ಎಸ್ ಕೆ ಕಾರ್ಖಾನೆಯ ಚಿಮಣಿ ಏರಿ ಪ್ರತಿಭಟನೆ ನಡೆಸಿದ್ದು, ಆತಂಕ ಸೃಷ್ಟಿಯಾಗಿದೆ.

Advertisement

ರಾಮಕೃಷ್ಣ ಹಾಗೂ ಮನು ಎಂಬುವರು ಕಾರ್ಖಾನೆ ಆವರಣದಲ್ಲಿರುವ ನೂರು ಮೀಟರ್ ಎತ್ತರವಿರುವ ಹೊಗೆ ಹೋಗುವ ಚಿಮಣಿ ಏರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾರ್ಖಾನೆಯನ್ನು ಸಚಿವ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಷುಗರ್ಸ್ ಕಂಪನಿ 40 ವರ್ಷಗಳ ಕಾಲ ಗುತ್ತಿಗೆ ಪಡೆದಿದ್ದಾರೆ. ಗುತ್ತಿಗೆ ಪಡೆದ ನಂತರ 25 ಮಂದಿ ಖಾಯಂ ನೌಕರರನ್ನು ವಜಾಗೊಳಿಸಿ ಬೇರೆ ಹೊಸದಾಗಿ ನೇಮಕಾತಿ ಮಾಡಿಕೊಂಡಿದ್ದರು. ಇದನ್ನು ವಿರೋಧಿಸಿ ಒಂದು ವರ್ಷದಿಂದ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ, ಹೈಕೋಟ್೯ ಮೆಟ್ಟಿಲೇರಿದ್ದರು. ಹೈಕೋಟ್೯ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಿತ್ತು. ಆದರೂ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನೌಕರರು ಚಿಮಣಿ ಏರಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಅಗ್ನಿಶಾಮಕ ದಳ, ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಮನವೊಲಿಕೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next