Advertisement

ಸುರತ್ಕಲ್: ಕೆಲಸದ ವೇಳೆ ದುರ್ಘ‌ಟನೆ ,ನೌಕರ ಸಾವು

06:34 PM Jun 23, 2022 | Team Udayavani |

ಸುರತ್ಕಲ್: ಎಂಆರ್‌ಪಿಎಲ್‌ನಲ್ಲಿ  ಗುತ್ತಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕನೋರ್ವ ಕ್ರೇನ್‌ ದುರಸ್ತಿ ವೇಳೆ ದುರ್ಘ‌ಟನೆಗೀಡಾಗಿ ಮೃತಪಟ್ಟ ಘಟನೆ ಜೂ.22ರಂದು ನಡೆದಿದೆ.

Advertisement

ಸುರತ್ಕಲ್‌ ಸಮೀಪದ ಕಾನಾ ನಿವಾಸಿ ಕೇಶವ ಕೋಟ್ಯಾನ್‌ (49) ಮೃತ ಕಾರ್ಮಿಕ. ಘಟನಾ ಸ್ಥಳದಲ್ಲಿ ಗಂಭೀರ ಗಾಯಗೊಂಡ ವೇಳೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟರು.

ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಗುತ್ತಿಗೆ ಸಂಸ್ಥೆಯ ವಿರುದ್ದ  ಪ್ರಕರಣ ದಾಖಲಾಗಿದೆ.

ಕರ್ತವ್ಯದ ವೇಳೆ ಮೃತಪಟ್ಟಿರುವುದರಿಂದ ಕಾರ್ಮಿಕ ಕುಟುಂಬಕ್ಕೆ ನೌಕರಿ ಹಾಗೂ 1 ಕೋಟಿ ರೂ.ಪರಿಹಾರ ಒದಗಿಸಬೇಕೆಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next