Advertisement

ಕೌಶಲ್ಯ ಅಭಿವೃದ್ಧಿಗಾಗಿ ಹೊಸ ಪರಿಕಲ್ಪನೆಗೆ ಒತ್ತು

10:32 AM Oct 21, 2021 | Team Udayavani |

ಬೆಂಗಳೂರು: ದೃಶ್ಯಕಲಾ ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ವೃದ್ಧಿಸುವ ದೃಷ್ಟಿಯಿಂದ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಜತೆಗೂಡಿ “ಹೊಸ ಸಾಧನೆಗಳು ಹೊಸ ಪರಿಕಲ್ಪನೆಗಳು” ಯೋಜನೆ ಸೃಜಿಸಿದೆ.

Advertisement

ವಿದ್ಯಾರ್ಥಿಗಳು ಕೇವಲ ಚಿತ್ರ ಬಿಡಿಸುವುದರಲ್ಲಷ್ಟೇ ಅಲ್ಲದೆ ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೃಶ್ಯಕಲೆ ಸಂಬಂಧ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಕೌಶಲ್ಯ ತರಬೇತಿ ಇದರಲ್ಲಿದ್ದು, ದೃಶ್ಯಕಲಾ ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳಲು ಲಲಿತಕಲಾ ಮತ್ತು ಶಿಲ್ಪಕಲಾ ಅಕಾಡೆಮಿಗಳು ಕ್ರಿಯಾಯೋಜನೆ ರೂಪಿಸಿವೆ.

ಈ ಯೋಜನೆಯಲ್ಲಿ ಅಧ್ಯಾಪಕರಿಗೆ ಮೊದಲು ಕೌಶ್ಯದ ಬಗ್ಗೆ ಮಾಹಿತಿ ನೀಡುವುದು ಬಳಿಕ ಅವರು ತರಗತಿಗಳಲ್ಲಿ ಕಲಿಕೆ ಜತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪಠ್ಯಕ್ರಮವನ್ನು ಹೊಂದಿಸಲಾ ಗಿದೆ. ರಾಜ್ಯದ ವಿವಿಧ ಭಾಗದ ಸುಮಾರು 70 ದೃಶ್ಯಕಲಾ ಕಾಲೇಜು ಅಧ್ಯಾಪಕರು ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ;- ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

ಜತೆಗೆ ಮೈಸೂರು, ಬೆಂಗಳೂರು, ಕುವೆಂಪು, ಕಲಬರುಗಿ ವಿಶ್ವವಿದ್ಯಾನಿಲಯ ಹಾಗೂ ಹಂಪಿ ಸೇರಿದಂತೆ ಸುಮಾರು 80 ಅಧ್ಯಾಪಕರುಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ತಿಳಿಸಿದರು. ನಮ್ಮಲ್ಲಿರುವ ಬಹುತೇಕ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಕೊರತೆಯಿದೆ. ಜತೆಗೆ ಕೇವಲ ಚಿತ್ರಕಲೆ ಬಿಡಿಸುವುದಕ್ಕೆ ಅವರು ಸೀಮಿತವಾಗಿದ್ದಾರೆ.

Advertisement

ಸಿನಿಮಾ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ದೃಶ್ಯಕಲೆಗೆ ಅವಕಾಶಗಳಿವೆ. ಆದರೆ, ಆ ಅವಕಾಶಗಳನ್ನು ಗಿಟ್ಟಿಸಿ ಕೊಳ್ಳಲು ಕೌಶಲ್ಯ ತರಬೇತಿ ಜತೆಗೆ ಉದ್ಯೋಗ ವಕಾಶಗಳ ಬಗ್ಗೆ ಮಾಹಿತಿ ಕೂಡ ಬೇಕಾಗುತ್ತದೆ. ಅದನ್ನು ನೀಡುವ ನಿಟ್ಟಿನಲ್ಲಿ ಎರಡೂ ಅಕಾಡೆಮಿಗಳು ಈ ಯೋಜನೆ ರೂಪಿಸಿವೆ ಎಂದರು.

ಚಿತ್ರಕಲಾ ಕ್ಷೇತ್ರದ ಆಸಕ್ತಿ ಇದ್ದವರು ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅಂತಹ ಸಾಧಕ ರನ್ನು ಕೂಡ ಕಾರ್ಯಾಗಾರಕ್ಕೆ ಆಹ್ವಾನ ನೀಡುವ ಇರಾದೆಯಿದೆ ಎಂದು ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಶೇಖರ್‌ ಮಾಹಿತಿ ನೀಡಿದ್ದಾರೆ.

“ಹೊಸ ಸಾಧನೆಗಳು ಹೊಸ ಪರಿಕಲ್ಪನೆ ಗಳು’ಯೋಜನೆಯಡಿ ಕಲಬುರಗಿಯಲ್ಲಿ ಅಧ್ಯಾ ಪಕರ ಕಾರ್ಯಾಗಾರ ಹಮ್ಮಿಕೊಳ್ಳಲು ಈಗಾಗಲೇ ಅಕಾಡೆಮಿಗಳು ತೀರ್ಮಾನಿಸಿವೆ. ಅ.23ರಂದು ಅಳಂದ ರಸ್ತೆಯ ಅಜೀಂ ಪ್ರೇಮ್‌ಜೀ ಫೌಂಡೇಷನ್‌ ನಲ್ಲಿ ಕಾರ್ಯಾಗಾರ ನಡೆಸಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಾಧಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಚಿತ್ರಕಲಾ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಜತೆಗೂಡಿ “ಹೊಸ ಸಾಧನೆಗಳು ಹೊಸ ಪರಿಕಲ್ಪನೆಗಳು’ ಯೋಜನೆ ರೂಪಿಸಲಾಗಿದೆ. ಚಿತ್ರಕಲೆಗೆ ಸಂಬಂಧ ಉದ್ಯೋಗ ಹಲವು ಕ್ಷೇತ್ರಗಳಲ್ಲಿವೆ. ಅವುಗಳ ಬಗ್ಗೆ ಯುವ ಸಮೂಹಕ್ಕೆ ಮಾಹಿತಿ ನೀಡಬೇಕಾಗಿದೆ. – ವೀರಣ್ಣ ಮಾ.ಅರ್ಕಸಾಲಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next