Advertisement

ಹೇಗೆ ಗೆದ್ದೆವು ಎಂದು ನನಗೆ ತಿಳಿದಿಲ್ಲ.. : ಗೆಲುವಿನ ಬಳಿಕ ಭಾವುಕರಾದ ಕಿಂಗ್ ಕೊಹ್ಲಿ

11:02 PM Oct 23, 2022 | Team Udayavani |

ಮೆಲ್ಬರ್ನ್ : “ಇದು ಒಂದು ಅತಿವಾಸ್ತವಿಕ ವಾತಾವರಣ. ಗೆಲುವು ಹೇಗೆ ಸಾಧ್ಯವಾಯಿತು ಎಂದು ನನಗೆ ತಿಳಿದಿಲ್ಲ ಎಂದು ವಿರಾಟ್ ಕೊಹ್ಲಿ ಅವರು ಪಾಕಿಸ್ಥಾನ ವಿರುದ್ದ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.

Advertisement

ಪಂದ್ಯದ ಗೆಲುವಿನ ಬಳಿಕ ನಿರೂಪಕ ರವಿಶಾಸ್ತ್ರಿ ಜತೆ ಮಾತನಾಡಿದ ಕೊಹ್ಲಿ, ಭಾವುಕರಾದರು. ”ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದರು. ಇದು ಟಿ 20ಯಲ್ಲಿ ನನ್ನ ಅತ್ಯುತ್ತಮ ಇನ್ನಿಂಗ್ಸ್” ಎಂದರು.

ಇದನ್ನೂ ಓದಿ :ಲಾಸ್ಟ್ ಓವರ್ ಹೈ ಡ್ರಾಮಾ.. ಕೊಹ್ಲಿ ಪಟಾಕಿಗೆ ಮೆಲ್ಬರ್ನ್ ನಲ್ಲಿ ದೀಪಾವಳಿ

”ಹಾರ್ದಿಕ್ ನನ್ನ ನಂಬಿಕೆಯನ್ನು ಇಟ್ಟುಕೊಂಡು ಹೇಳುತ್ತಿದ್ದರು. ನಾನು ಅವರ ಮಾತುಗಳಿಗೆ ಸೋತಿದ್ದೇನೆ. ಈ ಇನ್ನಿಂಗ್ಸ್ ಅನ್ನು ಮೊಹಾಲಿಗಿಂತ ಎತ್ತರದಲ್ಲಿ ಕಾಣುತ್ತೇನೆ” ಎಂದರು.

”ಜನಸಮೂಹ ಅಸಾಧಾರಣವಾಗಿದೆ.ನೀವು ನನ್ನನ್ನು ಬೆಂಬಲಿಸಿದ್ದೀರಿ ಮತ್ತು ತುಂಬಾ ಪ್ರೀತಿ ತೋರಿಸಿದ್ದೀರಿ.ನಾನು ಅಂತಹ ಬೆಂಬಲಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ” ಎಂದು ಕೊಹ್ಲಿ ಹೇಳಿದರು.

Advertisement

ಗೆಲುವಿನ ಸಂಭ್ರಮದ ಬಳಿಕ ಕೊಹ್ಲಿ ಕ್ರೀಡಾಂಗಣದಲ್ಲೇ ಆನಂದ ಭಾಷ್ಪ ಸುರಿಸಿದರು. ನಾಯಕ ರೋಹಿತ್ ಶರ್ಮಾ ಅವರನ್ನು ಅಪ್ಪಿ ಹೆಗಲ ಮೇಲೆ ಎತ್ತಿ ಹಿಡಿದು ಸಂಭ್ರಮಿಸಿದರು. ಗೆಲುವಿನಲ್ಲಿ ಕೊಡುಗೆ ನೀಡಿದ ಪಾಂಡ್ಯಾ ಸಿಹಿ ಮುತ್ತು ನೀಡಿ ಹರ್ಷದ ಉಲ್ಲಾಸದಲ್ಲಿ ತೇಲಾಡಿದರು.

ಭಾನುವಾರ ರಾತ್ರಿ ನಡೆದ ರೋಮಾಂಚನಕಾರಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 82 ರನ್ ಗಳಿಸಿ ಅಜೇಯರಾಗಿ ನಾಲ್ಕು ವಿಕೆಟ್‌ಗಳ ಗೆಲುವು ತಂದಿಟ್ಟರು. ಅರ್ಹವಾಗಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next