Advertisement

ಪ್ರಧಾನಿಯಿಂದ ಎಮೋಷನಲ್‌ ಬ್ಲಾಕ್‌ಮೇಲ್‌

12:22 PM Dec 12, 2017 | Team Udayavani |

ಬೆಂಗಳೂರು: ಕಾಂಗ್ರೆಸ್‌ನವರು ಪಾಕಿಸ್ತಾನದೊಂದಿಗೆ ಸೇರಿಕೊಂಡು ತಮ್ಮ ವಿರುದ್ಧ ಸುಪಾರಿ ನೀಡಿದ್ದರು ಎಂದು ಆಧಾರ ರಹಿತ ಹೇಳಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಚುನಾವಣೆಯಲ್ಲಿ ಜನರನ್ನು ಭಾವನಾತ್ಮಕವಾಗಿ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಸಂಸದ ವೀರಪ್ಪ ಮೋಯಿಲಿ ಆರೋಪಿಸಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆಯಿಂದ ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಭಯಭೀತರಾಗಿದ್ದಾರೆ. ದೇಶದ ಪ್ರಧಾನಿ ಕೊಲ್ಲಲು ಯಾರಾದರೂ ಸುಪಾರಿ ಕೊಟ್ಟಿದ್ದಾರೆ ಎಂದರೆ, ಒಂದು ವರ್ಷದಿಂದ ಪ್ರಧಾನಿಗೆ ಗೊತ್ತಿದ್ದರೂ ಅದನ್ನು ಇಲ್ಲಿಯಯವರೆಗೆ ಯಾಕೆ ಬಹಿರಂಗಪಡಿಸಿಲ್ಲವೆಂದು ಪ್ರಶ್ನಿಸಿದರು. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಚುನಾವಣೆ ವೇಳೆ ಜನರ ಅನುಕಂಪ ಗಳಿಸಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಸುಳ್ಳು ಹೇಳುವಂತೆ ಅವರ ಪಕ್ಷದ ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಯೇ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ನರೇಂದ್ರ ಮೋದಿ ಕೂಡ 2014 ರ ಚುನಾವಣೆ ವೇಳೆ ಪ್ರತಿಯೊಬ್ಬರ ಅಕೌಂಟ್‌ಗೂ 15 ಲಕ್ಷ ಹಣ ನೀಡುವುದಾಗಿ ಸುಳ್ಳು ಹೇಳಿ ಮತ ಪಡೆದಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next