Advertisement

ಧರ್ಮಸ್ಥಳ ಸಂಸ್ಥೆಯಿಂದ ತುರ್ತು ವಾಹನ

05:53 PM May 08, 2021 | Team Udayavani |

ತಿ.ನರಸೀಪುರ: ಕೊರೊನಾ ಸೋಂಕಿತರ ಉಪಯೋಗಕ್ಕಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕಲ್ಪಿಸಿರುವ ತುರ್ತುವಾಹನವನ್ನು ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ತಾಲೂಕುಯೋಜನಾಧಿಕಾರಿ ಸಂಜೀವನಾಯಕ್‌ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಗನ್ನಾಥ್‌ಗೆ ವಾಹನ  ‌ಹಸ್ತಾಂತರಿಸಿ ಗ್ರಾಮೀಣ,ಪಟ್ಟಣದ ಕೊರೊನಾ ಸೋಂಕಿತರ ಸೇವೆಗಾಗಿ ಬಳಸಿಕೊಳ್ಳುವಂತೆಮನವಿ ಮಾಡಿದರು.

Advertisement

ಸಂಸ್ಥೆ ಜಿಲ್ಲಾ ನಿರ್ದೇಶಕ ವಿಜಯ ಕುಮಾರ್‌,ಪ್ರತಿ ತಾಲೂಕಿಗೆ 2 ವಾಹನ ನೀಡಲಾಗಿದೆ ಎಂದರು. ತಾಲೂಕುಆರೋಗ್ಯಾಧಿಕಾರಿ ಡಾ.ರವಿಕುಮಾರ್‌, ಸಹಾಯಕ ರಾಜಣ್ಣ, ರೈತಮುಖಂಡ ಕಿರಗಸೂರು ಶಂಕರ್‌, ಜ್ಞಾನವಿಕಾಸ ಸಮನ್ವಯಾಧಿಕಾರಿ ಆಶಾ, ಮೇಲ್ವಿಚಾರಕರಾದ ಶೋಭಾ, ಮಮತಾ, ಸುಧಾ, ಪವಿತ್ರ,ಕಿರಣ್‌, ಸಂತೋಷ್‌, ವಾಹನ ಚಾಲಕ ನಾಗೇಂದ್ರ ಇತರರಿ‌ದ್ದರು.ವಾಹನ ಅವಶ್ಯಕತೆಯಿದ್ದರೆ  ಮೊಬೈಲ್‌ ಸಂಖ್ಯೆ 9901635294ಹಾಗೂ 8970522590 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next