Advertisement

ಅಂಬೇಡ್ಕ ರ್‌ ಆದರ್ಶ ಅಳವಡಿಸಿಕೊಳ್ಳಿ

03:56 PM Dec 07, 2019 | Team Udayavani |

ಸವದತ್ತಿ: ಡಾ.ಬಿ.ಆರ್‌.ಅಂಬೇಡ್ಕರರು ಸಾಮಾಜಿಕ ಸಮಾನತೆ ನಿವಾರಣೆಗಾಗಿ ಹೋರಾಡಿದ ಮಹಾನ್‌ ಭಾರತೀಯ ನಾಯಕರಲ್ಲೊಬ್ಬರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಆನಂದ ಮಾಮನಿ ಹೇಳಿದರು.

Advertisement

ಸ್ಥಳೀಯ ಅಂಬೇಡ್ಕರ್‌ ಉದ್ಯಾನವನದಲ್ಲಿ ಶಾಸಕ ಆನಂದ ಮಾಮನಿ ಅಂಬೇಡ್ಕರ್‌ ಪ್ರತಿಮೆಗೆ ಹಾರ ಹಾಕುವ ಮೂಲಕ ಪರಿನಿರ್ವಾಣ ದಿನ ಉದ್ಘಾಟಿಸಿ ಅವರು ಮಾತನಾಡಿ, ಅಂಬೇಡ್ಕರ್‌ ಮಹತ್ವದ ಪ್ರಯತ್ನಗಳು ದೇಶವನ್ನು ಒಗ್ಗೂಡಿಸಲು ಬಹಳಷ್ಟು ಸಹಾಯ ಮಾಡಿವೆ ಎಂದರು.

ಈ ವೇಳೆ ತಹಶೀಲ್ದಾರ್‌ ಶಂಕರ ಗೌಡಿ, ಪುರಸಭೆ ಮುಖ್ಯಾಧಿಕಾರಿ ಕೆ..ನಾಗನೂರ, ಸಮಾಜ ಕಲ್ಯಾಣ ಇಲಾಖೆ ಅ ಧಿಕಾರಿ ಆರ್‌.ಆರ್‌. ಕುಲಕರ್ಣಿ, ಎಲ್‌.ಎಸ್‌.ನಾಯಕ, ಶಿವಾನಂದ ಅಮಾತನವರ, ಶಿವು ಮೆಟ್ಟಿನ, ತಾಲೂಕು ಆಡಳಿತದ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next