Advertisement

ಆದಿವುಡುಪಿ ಮಸೀದಿಗೆ ಕಲ್ಲೆಸೆದು ಪರಾರಿ, ದೃಶ್ಯ ಕೆಮರಾದಲ್ಲಿ ಸೆರೆ

03:45 AM Jan 30, 2017 | Harsha Rao |

ಮಲ್ಪೆ: ಆದಿವುಡುಪಿ ಪಂದುಬೆಟ್ಟು ಸಮೀಪದ ನೂರುಲ್‌ ಇಸ್ಲಾಂ ಮಸೀದಿಗೆ ದುಷ್ಕರ್ಮಿಯೋರ್ವ ಕಲ್ಲೆಸೆದು ಮಸೀದಿಯ ಕಿಟಿಕಿಯ 2 ಗಾಜುಗಳನ್ನು ಪುಡಿಗೈದಿರುವ ಘಟನೆ ಶನಿವಾರ ಮಧ್ಯರಾತ್ರಿ ಸಂಭಧಿವಿಸಿದೆ.

Advertisement

ಮುಂಜಾನೆ 5 ಗಂಟೆ ಮಸೀದಿಯ ಧರ್ಮಗುರು ನಮಾಜ್‌ಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ರಾತ್ರಿ ಸುಮಾರು 12.16 ಕ್ಕೆ ಬೈಕಿನಲ್ಲಿ ಬಂದ ವ್ಯಕ್ತಿ ಮಸೀದಿಗೆ ಕಲ್ಲೆಸೆದು ಗಾಜುಗಳನ್ನು ಪುಡಿಗೈದು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಆತ ಬಿಳಿ ತ್ರಿಫೋರ್ತ್‌ ಪ್ಯಾಂಟ್‌ ಮತ್ತು ಹಳದಿ ಬಣ್ಣದ ಶರ್ಟ್‌ ಧರಿಸಿದ್ದಾನೆ.

ಡಿವೈಎಸ್ಪಿ ಕುಮಾರಸ್ವಾಮಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ನವೀನ್‌ಚಂದ್ರ, ಬ್ರಹ್ಮಾವರ ಸರ್ಕಲ್‌ ಇನ್ಸ್‌ ಪೆಕ್ಟರ್‌ ಶೀÅಕಾಂತ್‌, ತಹಶೀಲ್ದಾರ್‌ ಶ್ರೀಕಾಂತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next