Advertisement

ವಿವಾಹವಾಗಲು ವಧು ಹುಡುಕಿ ಕೊಡಿ; ಮಹಾರಾಷ್ಟ್ರ ಸರ್ಕಾರಕ್ಕೆ ಅವಿವಾಹಿತರ ಮನವಿ!

04:07 PM Dec 22, 2022 | Team Udayavani |

ಪುಣೆ: ದೇಶದ ಹಲವೆಡೆ ಪುರುಷ ಮತ್ತು ಮಹಿಳೆಯರ ಅನುಪಾತಃದಲ್ಲಿ ಭಾರೀ ಏರಿಳಿಕೆಯಾಗುತ್ತಿರುವ ವರದಿಯ ನಡುವೆಯೇ ವಿವಾಹವಾಗಲು “ವಧು”ವನ್ನು ಹುಡುಕಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿರುವ ಘಟನೆ ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯಲ್ಲಿ ನಡೆದಿದೆ.

Advertisement

ಇದನ್ನೂ ಓದಿ:2 ನೇ ಟೆಸ್ಟ್ ; ಭಾರತದ ಬಿಗು ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ 227 ಕ್ಕೆ ಆಲೌಟ್

ಸೋಲಾಪುರದಲ್ಲಿ ವಧು ವರರ ಮೋರ್ಚಾ ಮೆರವಣಿಗೆಯನ್ನು ಆಯೋಜಿಸಿದ್ದು, ಮೆರವಣಿಗೆ ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿತ್ತು. ಮಹಾರಾಷ್ಟ್ರದಲ್ಲಿ ಹೆಣ್ಣು-ಗಂಡು ಮಕ್ಕಳ ಅನುಪಾತ ಹೆಚ್ಚಿಸಲು ಪ್ರಸವ ಪೂರ್ವ ಜಾಗೃತಿ ಮತ್ತು ಪ್ರಸವ ಪೂರ್ವ ರೋಗ ನಿರ್ಣಯ ತಂತ್ರ ಪತ್ತೆ ಹಚ್ಚುವ ಕಾರ್ಯವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ಅಷ್ಟೇ ಅಲ್ಲ ಈ ಮೆರವಣಿಗೆಯಲ್ಲಿ ಭಾಗವಹಿಸಿರುವ ಅವಿವಾಹಿತರಿಗೆ ವಿವಾಹವಾಗಲು ವಧುವಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

ಹಲವು ವರರು ಮದುಮಗನಂತೆ ಸಿಂಗರಿಸಿಕೊಂಡು, ಕುದುರೆ ಸವಾರಿಯೊಂದಿಗೆ ಬ್ಯಾಂಡ್, ಮ್ಯೂಸಿಕ್ ಜತೆ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವುದು ವಿಶೇಷತೆಯಾಗಿತ್ತು ಎಂದು ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next