Advertisement

ದಸರಾ ಜಂಬೂಸವಾರಿ ಆನೆಗಳಿಗೆ ದುಬಾರೆಯಿಂದ ಬೀಳ್ಕೊಡುಗೆ

01:41 AM Aug 22, 2019 | sudhir |

ಮಡಿಕೇರಿ: ಮೈಸೂರು ದಸರಾ ಗಜಪಯಣದಲ್ಲಿ ಪಾಲ್ಗೊಳ್ಳಲು ದುಬಾರೆ ಶಿಬಿರದ 3 ಆನೆಗಳನ್ನುಹುಣಸೂರು ವೀರನ ಹೊಸಳ್ಳಿ ಶಿಬಿರಕ್ಕೆ ಬುಧವಾರ ಕಳುಹಿಸಿಕೊಡಲಾಯಿತು. ದುಬಾರೆ ಶಿಬಿರದ ಆನೆಗಳಾದ ಧನಂಜಯ (47), ಈಶ್ವರ (51), ವಿಜಯ (56) ಆನೆಗಳಿಗೆ ಪೂಜೆ ಸಲ್ಲಿಸಿ ಅರಣ್ಯ ಇಲಾಖೆ ಅಧಿಕಾರಿ, ಸಿಬಂದಿ ಬೀಳ್ಕೊಟ್ಟರು.

Advertisement

ಪೂಜೆಯ ಅನಂತರ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌. ಪ್ರಭಾಕರನ್‌, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ನೆಹರು, ಉಪ ಅರಣ್ಯ ವಲಯಾಧಿಕಾರಿಗಳಾದ ಕನ್ನಂಡ ರಂಜನ್‌, ಅನಿಲ್ ಮತ್ತು ಸಿಬಂದಿ ಬೆಲ್ಲ, ಕಬ್ಬು ತಿನ್ನಿಸಿ ಆನೆಗಳನ್ನು ಬೀಳ್ಕೊಡಲಾಯಿತು. ಆನೆ ಜತೆಗೆ ಮಾವುತ, ಕವಾಡಿಗರ ಕುಟುಂಬ ಸದಸ್ಯರು ತೆರಳಿದ್ದಾರೆ.

ಎರಡನೇ ತಂಡ ಸೆಪ್ಟಂಬರ್‌ ತಿಂಗಳಲ್ಲಿ ಮೈಸೂರಿಗೆ ಮತ್ತೆ 3 ಆನೆಗಳನ್ನು ಕಳುಹಿಸಿಕೊಡಲಾಗುವುದು ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಸಿ.ಆರ್‌.ಅರುಣ್‌ ಮಾಹಿತಿ ನೀಡಿದರು.

ಮುಂದಿನ ವಾರ ತೆರಳುವ ಮತ್ತೂಂದು ತಂಡದ ಮೂರು ಆನೆಗಳು ಈ ಸಂದರ್ಭ ಜತೆಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next