Advertisement

ಕಾಫಿತೋಟದಲ್ಲಿ ಕಾಡಾನೆ ದಂಡು: ಬೆಳೆ ನಾಶ ಮಾಡಿದ 18ಕ್ಕೂ ಹೆಚ್ಚು ಕಾಡಾನೆಗಳು

12:43 PM Oct 16, 2020 | keerthan |

ಚಿಕ್ಕಮಗಳೂರು: ಸುಮಾರು 18ಕ್ಕೂ ಹೆಚ್ಚು ಕಾಡಾನೆಗಳು ಕಾಫಿತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

Advertisement

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹಳಸೆ, ಕೆಲ್ಲೂರು, ದುಂಡುಗ, ಕುನ್ನಹಳ್ಳಿ ಗ್ರಾಮಗಳಲ್ಲಿ 18ಕ್ಕೂ ಹೆಚ್ಚು ಕಾಡಾನೆಗಳು ದಾಂಗುಡಿಯಿಟ್ಟಿದ್ದು, ಮನಸೋ ಇಚ್ಛೆ ತಿರುಗಾಡಿ ಬೆಳೆ ನಾಶ ಮಾಡುತ್ತಿದೆ.

ಕಾಡಾನೆ ದಾಳಿಯಿಂದ ಕಾಫಿ, ಮೆಣಸು, ಬಾಳೆ, ಅಡಿಕೆ ಬೆಳೆ ನಾಶವಾಗಿದ್ದು,  ಕಾಡಾನೆಗಳನ್ನು ಓಡಿಸಲು ಅರಣ್ಯ ಸಿಬ್ಬಂದಿಗಳ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ:ಚಿಕಿತ್ಸೆ ಫಲಕಾರಿಯಾಗದೆ ಮೂಡುಬಿದಿರೆ ಶಿಕ್ಷಕಿ ನಿಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next