Advertisement

Channapatna; ಸಂಕ್ರಾಂತಿ ದಿನವೇ ಕಾಡಾನೆಗಳ ದಾಳಿ – ರೈತನ ಬೆಳೆ ನಾಶ

03:07 PM Jan 15, 2024 | Team Udayavani |

ರಾಮನಗರ: ಸಂಕ್ರಾಂತಿ ದಿನವೇ ರೈತನೊಬ್ಬನ ತೋಟಕ್ಕೆ ನುಗ್ಗಿದ ಕಾಡಾನೆಗಳು ಬೆಳೆಗೆ ಹಾನಿ ಮಾಡಿದ ಘಟನೆ ಚನ್ನಪಟ್ಟಣದ ತಗಚಗೆರೆ ಗ್ರಾಮದಲ್ಲಿ ನಡೆದಿದೆ.

Advertisement

ರೈತ ಪ್ರಸನ್ನಕುಮಾರ್ ಎಂಬುವರಿಗೆ ಸೇರಿದ 1.50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ  ಟೊಮ್ಯಾಟೊ ಬೆಳೆಗೆ ಆನೆಗಳ ಹಿಂಡು ದಾಳಿ ಮಾಡಿದೆ. ತಡರಾತ್ರಿ ದಾಳಿ ಮಾಡಿ ಬೆಳೆ ಸಂಪೂರ್ಣ ನಾಶ ಮಾಡಿದೆ.

ಇದೇ ವೇಳೆ 5 – 6 ತೆಂಗಿನ ಮರಗಳಿಗೆ ಸಹ ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂದು ರೈತರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next