Advertisement

ಹುಣಸೂರು: ಮುಂದುವರೆದ ಕಾಡಾನೆ ಪುಂಡಾಟ : ಜಖಂಗೊಂಡ ಟ್ರ್ಯಾಕ್ಟರ್, ಕಾರು

06:03 PM Feb 16, 2021 | Team Udayavani |

ಹುಣಸೂರು : ಕಾಡಾನೆ ದಾಳಿಗೆ ಒಂದು ಟ್ರ್ಯಾಕ್ಟರ್ ಟ್ರಾಲಿ ಮತ್ತು ಕಾರು ಜಖಂಗೊಂಡಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ಅರಣ್ಯ ವಲಯದ ಚಿಕ್ಕಹೆಜ್ಜೂರು ಮತ್ತು ಮುದುಗನೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ..

Advertisement

ಹನಗೋಡು ಹೋಬಳಿಯ  ಮುದಗನೂರು ಗ್ರಾಮದ ನಾಗೇಶ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಟ್ರಾಲಿಯನ್ನು ಕಾಡಾನೆ ಪಲ್ಟಿ ಮಾಡಿ ಪೂರ್ಣ ಜಖಂಗೊಳಿಸಿದೆ. ಚಿಕ್ಕ ಹೆಜ್ಜೂರು ಗಿರಿಜನ ಹಾಡಿಯ ಭಾಸ್ಕರ್ ರವರಿಗೆ ಸೇರಿದ ಕೆ ಎ 52 ಎಂ ಎಪ್ 9688 ಮಾರುತಿ ಆಲ್ಟೊ ಕಾರ್ ಹಿಂದೆ ಮತ್ತು ಮುಂದಿನ ಗ್ಲಾಸ್ ಒಡೆದು ಹಾಕಿ ಕಾರನ್ನು ಜಖಂಗೊಳಿಸಿದೆ.

ಕಾಡಾನೆ ಕಾಡಿಗೆ ತೆರಳದೆ ನಾಗಪುರ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿ ಬೀಡುಬಿಟ್ಟಿದ್ದು ಅರಣ್ಯ ಇಲಾಖೆಯವರು ಸಲಗವನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ : ಸೂಫಿ ಸಂತ ಚಿಶ್ತಿಯವರ 809ನೇ ಉರೂಸ್ ಗೆ ಪ್ರಧಾನಿಯಿಂದ “ಚಾದರ” ಸಮರ್ಪಣೆ..!

ಕಾಡಾನೆ ಊರಿನ ಒಳಗೆ ಆಗಾಗ್ಗೆ ಬಂದು ದಾಂಧಲೆ ಮಾಡುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ ಅರಣ್ಯ ಇಲಾಖೆ ಸಾಕಾನೆಗಳ ಸಹಾಯದಿಂದ ಕಾಡಿಗಟ್ಟಲು  ಶ್ರಮವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next