Advertisement

ಅಡೂರು ಬಳಿ ಆನೆ ಹಾವಳಿ

01:00 AM Mar 21, 2019 | Harsha Rao |

ಅಡೂರು: ಇಲ್ಲಿನ ಪೊಯೆಮಜಲು ನಿವಾಸಿ ದೇವಪ್ಪ ಗೌಡ ಅವರ ತೋಟಕ್ಕೆ ಮಂಗಳವಾರ ತಡರಾತ್ರಿ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿದ್ದು, ಅಪಾರ ಕೃಷಿ ನಾಶ ಮಾಡಿದೆ.

Advertisement

ಆನೆಗಳು 100ರಷ್ಟು ಬಾಳೆ ಗಿಡಗಳು, 10 ಅಡಿಕೆ ಮರ, 5 ತೆಂಗಿನ ಸಸಿಗಳನ್ನು ನಾಶಗೊಳಿಸಿವೆ.
ತಡರಾತ್ರಿ 1 ಗಂಟೆ ವೇಳೆಗೆ ತೋಟದಲ್ಲಿ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ನೋಡಿದಾಗ ಆನೆಗಳು ವ್ಯಾಪಕ ಕೃಷಿ ನಾಶದಲ್ಲಿ ತೊಡಗಿರುವುದು ಕಂಡು ಬಂತು. ಗಂಟೆ ಬಾರಿಸಿ ಶಬ್ದ ಮಾಡಿದರೂ ಆನೆಗಳು ಮುಂಜಾನೆ 4 ಗಂಟೆ ವರೆಗೂ ತೋಟದಲ್ಲೇ ಇದ್ದು ಹಾನಿ ನಡೆಸಿದವು. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಕೆಲವು ತಿಂಗಳ ಹಿಂದೆಯಷ್ಟೇ ಅಡೂರು ಮತ್ತು ಪಾಂಡಿಯ ಹಲವೆಡೆಗಳಲ್ಲಿ ಕಾಡಾನೆ ದಾಳಿ ನಡೆಸಿತ್ತು. ಕಾಡಾನೆ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next