Advertisement

Elephant Rescue: ಕಾಡಾನೆ ಕಾರ್ಯಾಚರಣೆ: ಕಿಲ್ಲರ್ ಸಲಗ ಬಿಟ್ಟು ಸೆರೆಯಾಯ್ತಾ ಬೇರೆ ಆನೆ ?

09:44 AM Nov 16, 2023 | Team Udayavani |

ಚಿಕ್ಕಮಗಳೂರು: ಇಬ್ಬರ ಸಾವಿಗೆ ಕಾರಣವಾದ ಕಾಡಾನೆಯನ್ನು ಸೆರೆ ಹಿಡಿಯಲು ನಡೆಸಿದ ಕಾರ್ಯಾಚರಣೆಯಲ್ಲಿ ಕಾಡಾನೆಯೊಂದು ಸೆರೆಯಾಗಿದ್ದು ಇದೀಗ ಗ್ರಾಮದ ಜನರ ಅನುಮಾನಕ್ಕೆ ಕಾರಣವಾಗಿದೆ.

Advertisement

ನರಹಂತಕ ಆನೆಯನ್ನು ಸೆರೆಹಿಡಿಯಲು ನಡೆಸಿದ ಕಾರ್ಯಾಚರಣೆಯಲ್ಲಿ ಕಾಡಾನೆಯೊಂದು ಸೆರೆಯಾಗಿದ್ದು ಆದರೆ ಈ ಆನೆ ಇಬ್ಬರನ್ನು ಕೊಂದಿರುವ ಆನೆಯಲ್ಲ ಎಂಬುದು ಗ್ರಾಮದ ಜನರ ಆರೋಪವಾಗಿದೆ ಆದರೆ ಇದಕ್ಕೆ ಅರಣ್ಯ ಇಲಾಖೆ ಸ್ಪಷ್ಟನೆಯನ್ನೂ ನೀಡಿದ್ದು ಕಾಡಾನೆ ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸುವುದಾಗಿ ಹೇಳಿದ್ದಾರೆ.

ನಿನ್ನೆ ಮಧ್ಯಾಹ್ನ ಕುಂದೂರು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಬೆನ್ನು ಹತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕುಂದೂರು ಸಮೀಪ ಅರವಳಿಕೆ ಚುಚ್ಚು ಮದ್ದು ನೀಡಿದ್ದರು. ಆ ಬಳಿಕ ನಿರಂತರ ಕಾರ್ಯಾಚರಣೆ ನಡೆಸಿ ಒಂಟಿ ಸಲಗವನ್ನು ಸೆರೆ ಹಿಡಿದಿದ್ದಾರೆ, ಆದರೆ ಇಬ್ಬರನ್ನ ಕೊಂದ ಒಂಟಿ ಸಲಗ ಬಿಟ್ಟು ಬೇರೆ ಆನೆಯನ್ನು ಸೆರೆ ಹಿಡಿದಿರೋ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Rescue: 96 ಗಂಟೆಗಳ ಕಾಲ ಸುರಂಗದೊಳಗೆ ಬಂಧಿಯಾದ ಕಾರ್ಮಿಕರು, ಕಾರ್ಯಾಚರಣೆ ಮುಂದುವರಿಕೆ

Advertisement

Udayavani is now on Telegram. Click here to join our channel and stay updated with the latest news.

Next