Advertisement

Bandipur: ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ವ್ಯಾಘ್ರನನ್ನೇ ಅಟ್ಟಾಡಿಸಿದ ಗಜರಾಜ…

03:48 PM Jun 27, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಕೆರೆಯಲ್ಲಿ ಮಲಗಿದ್ದ ಹುಲಿಯನ್ನು ಕಾಡಾನೆಯೊಂದು ಅಟ್ಟಾಡಿಸಿದ ಘಟನೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನಡೆದಿದೆ.

Advertisement

ಕೆರೆಯಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿ ಮಲಗಿದ್ದ ವ್ಯಾಘ್ರನನ್ನು ಗಮನಿಸಿದ ಗಜರಾಜ ತನ್ನ ಮೇಲೆ ದಾಳಿ ಮಾಡಬಹುದು ಎಂಬ ಭಯದಲ್ಲಿ ಹುಲಿಯನ್ನು ಅಟ್ಟಡಿಸಿದೆ. ಆನೆ ದಾಳಿ ಮಾಡಲು ಮುಂದಾಗುವುದನ್ನು ಕಂಡ ಹುಲಿ ಪೇಚಿಗೆ ಸಿಲುಕಿ ಕೆರೆಯಿಂದ ಪೇರಿ ಕಿತ್ತಿದೆ. ಆನೆ ಸ್ಥಳದಿಂದ ತೆರಳಿದ ನಂತರ ಮತ್ತೇ ಕೆರೆಗೆ ಹುಲಿರಾಯ ಬಂದು ಮಲಗಿದ್ದಾನೆ. ಈ ದೃಶ್ಯವನ್ನು ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ.

ಹಸಿನಿಂದ ಕಂಗೊಳಿಸುತ್ತಿದೆ ಅಭಯಾರಣ್ಯ: ಮೇ, ಜೂನ್ ಮಾಯೆಯಲ್ಲಿ ಬಂಡೀಪುರ ಅಭಯಾರಣ್ಯಕ್ಕೆ ಉತ್ತಮ ಮಳೆಯಾದ ಪರಿಣಾಮ ಕೆರೆ-ಕಟ್ಟೆಳಲ್ಲಿ ನೀರು ತುಂಬಿದೆ. ಜೊತೆಗೆ ಕಾಡೆಲ್ಲ ಅಚ್ಚ ಹಸಿರನ್ನು ಹೊದ್ದು ನಿಂತಿದ್ದು, ಕಾಡುಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ದೂರವಾಗಿದೆ. ಜೊತೆಗೆ ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಸಹ ಗಣನೀಯವಾಗಿ ಏರಿಕೆ ಕಂಡಿದೆ.

ಇದನ್ನೂ ಓದಿ: Miraculously Escapes: ರೀಲ್ಸ್ ಮಾಡಲು ಹೋಗಿ ಸಿಡಿಲಿನ ಆಘಾತದಿಂದ ಬಾಲಕಿ ಜಸ್ಟ್ ಎಸ್ಕೇಪ್…

Advertisement

Udayavani is now on Telegram. Click here to join our channel and stay updated with the latest news.

Next