Advertisement

ಚಿಕ್ಕಮಗಳೂರು: ಗದ್ದೆ ಬೇಲಿಗೆ ಹಾಕಿದ್ದ ವಿದ್ಯುತ್ ಸ್ಪರ್ಷದಿಂದ ಆನೆ ಸಾವು, ರೈತ ಪರಾರಿ

04:48 PM Jul 31, 2020 | keerthan |

ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶದಿಂದ ಆನೆಯೊಂದು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಅರಣ್ಯವ್ಯಾಪ್ತಿಯಲ್ಲಿ‌ ಗುರುವಾರ ರಾತ್ರಿ ನಡೆದಿದೆ.

Advertisement

ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಬಳಿ ಘಟನೆ ನಡೆದಿದ್ದು, ಹುಲಿಯಪ್ಪ ಎಂಬುವರ ಜಮೀನಿನಲ್ಲಿ 3 ವರ್ಷದ ಆನೆ ಸಾವನ್ನಪ್ಪಿದೆ. ರಾತ್ರಿ ವೇಳೆ‌ ಜೋಳದ ಹೊಲಕ್ಕೆ ನುಗಿದ್ದ ವೇಳೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.

ತನ್ನ ಹೊಲದಲ್ಲಿ ಆನೆ ಸಾವನ್ನಪ್ಪಿದ್ದು ತಿಳಿದು ರೈತ ಹುಲಿಯಪ್ಪ ತಲೆಮರೆಸಿಕೊಂಡಿದ್ದಾನೆ.

ಕಳೆದ ವರ್ಷವೂ ವಿದ್ಯುತ್ ಸ್ಪರ್ಶದಿಂದ ಇದೇ ವ್ಯಾಪ್ತಿಯಲ್ಲಿ ಗಂಡಾನೆ ಸಾವನ್ನಪ್ಪಿತ್ತು. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next