Advertisement
ಆನೆಗಳ ಹಿಂಡು ಸಂಚರಿಸುವ ಸ್ಥಳಕ್ಕೆ ಕಾರಿಡಾರ್ ಎನ್ನುತ್ತಾರೆ. ಈ ಕಾರಿಡಾರ್ ಉಳಿಸಲು ಈ ಬಾರಿ ಅರಣ್ಯ ಇಲಾಖೆ ವನ್ಯಜೀವಿ ಸಪ್ತಾಹದ ಭಾಗವಾಗಿ ಸಂರಕ್ಷಣಾ ಅಭಿಯಾನ ನಡೆಸಿದೆ. 18ನೇ ಶತಮಾನದಲ್ಲಿ ಮೈಸೂರು ಅರಣ್ಯ ಭಾಗದಿಂದ ಪ್ರತಿವರ್ಷ ದಾಂಡೇಲಿ ಅರಣ್ಯ ಭಾಗಕ್ಕೆ ಸೊರಬ, ಬನವಾಸಿ, ಮುಂಡಗೋಡ, ಯಲ್ಲಾಪುರ, ಭಗವತಿ ಮಾರ್ಗವಾಗಿ ಆನೆಗಳ ಹಿಂಡು ಮಳೆಗಾಲದ ಬಳಿಕ ಬರುತ್ತಿದ್ದವು. ದಾಂಡೇಲಿ ಕಾಡು ಅವರ ಪಾಲಿನ ರೆಸಾರ್ಟ್ ಆಗಿದ್ದವು. ಆನೆಗಳ ಮೊಮ್ಮಕ್ಕಳಿಗೂ ಅವರು ನಡೆದು ಬಂದ ದಾರಿ ನೆನಪು ಇರುತ್ತವಂತೆ!
Related Articles
Advertisement
ಇದನ್ನೂ ಓದಿ :ದೇವೇಗೌಡರ ಕಾಲದಿಂದಲೂ ಕಣ್ಣೀರು ನಾಟಕವಾಡಿ ಜನರನ್ನು ಸೆಳೆಯುವ ಜೆಡಿಎಸ್: ಸಿದ್ದರಾಮಯ್ಯ
ಕುಲ ಸಂಜಾತರ ಜೊತೆ ಸೇರಿಸಲು ಈಗ ಕಾರಿಡಾರ್ ಉಳಿದಿಲ್ಲ. ಆ ಮಾರ್ಗದಲ್ಲಿ ಮರಳಿ ಬರಲು ಹೋದರೆ ಆನೆಗಳ ಮಾರ್ಗ ಕಟ್ಟಾಗಿದೆ. ಜನರೂ ಹೋಗಲು ಬಿಡುತ್ತಿಲ್ಲ. ಈಗಿರುವ ಆನೆಗಳ ಹಿಂಡನ್ನು ಹಿಡಿದು ಸಾಗಾಟ ಮಾಡುವುದೂ ಸುಲಭದ ಮಾತಲ್ಲ. ಈ ಕಾರಣದಿಂದ ದಾಂಡೇಲಿ ಆನೆ ದಾಂಡೇಲಿಯ ದಟ್ಟ ಕಾಡು, ಸಾಗವಾನಿ ನಡುತೋಪಿನ ಪ್ರದೇಶ ಹಾಗೂ ದೂರದ ಶಿರಸಿ ಅರಬರೆ ಕಾಡಿಗೂ ಬಂದು ಹೋಗುತ್ತಿವೆ. ಭತ್ತದ ಗದ್ದೆ, ತೋಟಕ್ಕೆ ಬಂದು ದಾಳಿ ಮಾಡುವ ಕೂಲವೂ ಹತ್ತಿರ ಆಗುತ್ತಿದೆ ಎಂಬ ಆತಂಕ ಕೂಡ ರೈತರಲ್ಲಿ ಕಾಡುತ್ತಿದೆ.
ಎಲ್ಲೆಲ್ಲಿದೆ ಕಾರಿಡಾರ್?: ಆನೆಗಳ ಸಂತಾನೋತ್ಪತ್ತಿ ಹಾಗೂ ಅವುಗಳ ಆರೋಗ್ಯ ವರ್ಧನೆ ಕಾರಣದಿಂದ ಅವುಗಳ ಕಾರಿಡಾರ್ ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಅರಣ್ಯ ಇಲಾಖೆ ಕಾರಿಡಾರ್ ಸಂರಕ್ಷಣೆಗೆ ಮುಂದಾಗಿದೆ. ಇದಕ್ಕಾಗಿ 138 ವಿವಿಧ ರಾಜ್ಯದೊಳಗಿನ, 28 ಅಂತರ್ ರಾಜ್ಯದ, 17 ಅಂತಾರಾಷ್ಟ್ರೀಯ ಆನೆ ಕಾರಿಡಾರ್ ಗುರುತಿಸಲಾಗಿದೆ. ಪ್ರತಿವರ್ಷ ಆನೆ ಮಾನವ ಸಂಘರ್ಷದಲ್ಲಿ 50ಕ್ಕೂ ಹೆಚ್ಚು ಜೀವ ಹಾನಿ ಆಗುತ್ತಿದೆ. ಆನೆಗಳನ್ನು ಉಳಿಸಿ, ಮನುಷ್ಯ ಕೂಡ ಸಹಜೀವನ ನಡೆಸಲು ಆನೆ ಕಾರಿಡಾರ್ ಉಳಿಸುವದೊಂದೇ ಮಾರ್ಗವಾಗಿದೆ!
– ರಾಘವೇಂದ್ರ ಬೆಟ್ಟಕೊಪ್ಪ