Advertisement

Elephant Census ಬಂಡೀಪುರದಲ್ಲಿ ಆನೆ ಗಣತಿ ಸಂಪನ್ನ

11:05 PM May 25, 2024 | Team Udayavani |

ಮೈಸೂರು/ಚಾಮರಾಜನಗರ: ಜಿಲ್ಲೆಯ ಬಿಆರ್‌ಟಿ, ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ 3 ದಿನಗಳಿಂದ ನಡೆಯುತ್ತಿದ್ದ ಆನೆ ಗಣತಿ ಪ್ರಕ್ರಿಯೆಯು ಶನಿವಾರ ಸಂಪನ್ನಗೊಂಡಿದೆ.

Advertisement

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೇ 23-25ರ ವರೆಗೆ 3 ದಿನಗಳ ಕಾಲ ಉದ್ಯಾನದ ಎಲ್ಲ 13 ವಲಯಗಳ ಒಟ್ಟು 113 ಬೀಟ್‌ಗಳಲ್ಲಿ ಸುಮಾರು 350ರಿಂದ 370 ನೌಕರರು ಆನೆಗಳನ್ನು ಲೆಕ್ಕ ಹಾಕಿದ್ದಾರೆ. ನೌಕರರು ಕಾಲ್ನಡಿಗೆ ಮೂಲಕ, 118 ಟ್ರಾನ್ಸೆಕ್ಟ್ ಲೈನ್‌, ಕೆರೆ-ಕಟ್ಟೆಗಳು, ಅರಣ್ಯ ವ್ಯಾಪ್ತಿಯಲ್ಲಿ ಆನೆ ಇರುವಿಕೆಯನ್ನು ಗುರುತಿಸಿ ದತ್ತಾಂಶ ಸಂಗ್ರಹಿಸಿದರು.

ಇನ್ನು ಇಲ್ಲಿನ ಬಿಳಿರಂಗನ ಬೆಟ್ಟದ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 6 ವಲಯಗಳಲ್ಲಿ 70 ಹೆಚ್ಚು ಅರಣ್ಯ ಇಲಾಖೆಯ ಸಿಬಂದಿ ತಂಡ ಕೆರೆ-ಕಟ್ಟೆ ಪ್ರದೇಶದ ದೂರದಲ್ಲಿ ಕುಳಿತು ಆನೆಗಳನ್ನು ಗುರುತಿಸುವ ಕೆಲಸ ನಡೆಯಿತು.

ಮೈಸೂರು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ 843 ಚ.ಕಿ.ಮೀ. ವಿಸ್ತಾರದ ಉದ್ಯಾನದಲ್ಲಿ 300ಕ್ಕೂ ಹೆಚ್ಚು ಸಿಬಂದಿ 91 ಬೀಟ್‌ಗಳಲ್ಲಿ ಆನೆ ಗಣತಿ ನಡೆಸಿದರು. 15ಕಿ.ಮೀ. ಕಾಲ್ನಡಿಗೆ. ಆನೆಗಳ ಲದ್ದಿ ಹಾಗೂ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಗುಂಪು ಆನೆಗಳು, ಮಕನಾ (ಗಂಡು) ಆನೆ, ಹೆಣ್ಣಾನೆ ಹಾಗೂ ಮರಿ ಆನೆಗಳ ಫೋಟೋ ಮೂಲಕ ದತ್ತಾಂಶ ಸಂಗ್ರಹಿಸಿದರು. ನಾಗರಹೊಳೆ ಉದ್ಯಾನವು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಬ್ಬಿದ್ದು, ಗಣತಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next