Advertisement

ಬೇಗೂರು ಬಳಿ ಮಿತಿಮೀರಿದ ಕಾಡಾನೆ ದಾಳಿ

12:48 PM Jan 16, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿ ದ್ದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಹೊಸಪುರ ಸುತ್ತಮುತ್ತಲಿನ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬಂಡೀಪುರ ಹುಲಿ ಯೋಜನೆಯ ಓಂಕಾರ್‌ ವಲಯದ ಕಾಡಂಚಿನಲ್ಲಿ ಕಂದಕಗಳು ಮುಚ್ಚಿ ಹೋಗಿದ್ದು , ಹೊಸ ಪುರದ ಶಿವಯ್ಯಗೌಡ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೋ ಬೆಳೆಯನ್ನು ಸಂಪೂರ್ಣ ನಾಶಪಡಿಸಿವೆ. ಇಲ್ಲಿಗೆ ಸಮೀಪದ ಮಹಾಲಿಂಗಪ್ಪ ಅವರ ಜಮೀನಿನಲ್ಲಿ ಅರಿಶಿಣ ಹಾಗೂ ಟೊಮೆಟೋ, ಮೂರ್ತಿ ಹಾಗೂ ದೇವಮ್ಮ ಅವರ ಜಮೀನಿನಲ್ಲಿ ಬೆಳೆದಿದ್ದ ಅರಿಶಿಣ ಬೆಳೆ ಗಳನ್ನು ನಾಶಪಡಿಸಿವೆ. ಈ ಬಗ್ಗೆ ಓಂಕಾರ್‌ ವಲಯದ ಅರಣ್ಯ ಇಲಾಖೆಗೆ ಕರೆ ಮಾಡಿ ತಿಳಿಸಿದರೂ ಇನ್ನೂ ಸ್ಥಳಕ್ಕೆ ಯಾವುದೇ ಸಿಬ್ಬಂದಿ ಭೇಟಿ ನೀಡಿಲ್ಲ ಎಂದು ರೈತರು ದೂರಿದ್ದಾರೆ.

ಇದನ್ನೂ ಓದಿ:KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ

ಗಸ್ತು ನಡೆಸಿ: ಕಂದಕಗಳು ಮುಚ್ಚಿಕೊಂಡಿರುವ ಪ್ರದೇಶ ಗಳಲ್ಲಿ ರಾತ್ರಿ ಗಸ್ತು ನಡೆಸುತ್ತಿಲ್ಲ. ರೈತರಿಗೆ ಪಟಾಕಿ ವಿತರಣೆ ಮಾಡುತ್ತಿಲ್ಲ. ಇದರಿಂದ ಆನೆಗಳ ಹಾವಳಿ ಮಿತಿ ಮೀರಿ ಹೋಗಿದೆ. ಬೆಳಗಾಗುತ್ತಿದ್ದಂತೆ ಗುಡ್ಡದ ಬದಿಗೆ ತೆರಳುವ ಆನೆಗಳು ರಾತ್ರಿಯಾಗುತ್ತಿದ್ದಂತೆ ಜಮೀನಿಗೆ ದಾಳಿ ಮಾಡು ತ್ತಿವೆ. ಜಮೀನುಗಳಿಗೆ ಆನೆಗಳು ಬಂದಿರುವ ಬಗ್ಗೆ ಕರೆ ಮಾಡಿದರೂ ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿ ಗಟ್ಟಲು ಮುಂದಾಗುತ್ತಿಲ್ಲ.

ಜಮೀನಿನಿಂದ ಓಡಿಸಲು ಮುಂದಾಗುವ ರೈತರ ಮೇಲೆಯೇ ಆನೆಗಳು ದಾಳಿ ಮಾಡಲು ಮುಂದಾಗುತ್ತಿದ್ದು ಇದರಿಂದ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಕಾವಲು ನಡೆಸಲು ಹೆದರುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿ ದರೂ ಯಾವುದೇ ಉಪಯೋಗವಾಗುತ್ತಿಲ್ಲ. ಬೆಳೆನಷ್ಟಕ್ಕೆ ಅರಣ್ಯ ಇಲಾಖೆ ಪುಡಿಗಾಸಿನ ಪರಿಹಾರ ನೀಡುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಆನೆಗಳ ದಾಳಿ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಹೊಸಪುರ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವೇಗೌಡ, ಮುಖಂಡ ಶಿವರುದ್ರಪ್ಪ ಮತ್ತಿತರ ರೈತರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next