Advertisement

ಅರಣ್ಯ ಇಲಾಖೆ ವಾಹನದ ಮೇಲೆ ಕಾಡಾನೆ ದಾಳಿ

12:11 AM Jan 26, 2020 | Lakshmi GovindaRaj |

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಕಾಡಾನೆಯೊಂದು ಶನಿವಾರ ಅರಣ್ಯ ಇಲಾಖೆಯ ವಾಹನದ ಮೇಲೆ ದಾಳಿ ಮಾಡಿದೆ. ತರೀಕೆರೆ ತಾಲೂಕಿನ ಲಕ್ಕವಳ್ಳಿ ವಲಯದ ಅಭಯಾರಣ್ಯದ ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಆನೆ ದಾಳಿಯಿಂದ ವಾಹನ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್‌ ವಾಹನದಲ್ಲಿದ್ದವರೆಲ್ಲ ಬಚಾವ್‌ ಆಗಿದ್ದಾರೆ. ಶನಿವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಅರಣ್ಯ ಇಲಾಖೆಯ ವಾಹನದಲ್ಲಿ ಕೆಲಸಗಾರರನ್ನು ಅಭಯಾರಣ್ಯದೊಳಗೆ ಕರೆದೊಯ್ಯಲಾಗುತ್ತಿತ್ತು.

Advertisement

ವಾಹನದ ಶಬ್ದ ಕೇಳಿದ ಕಾಡಾನೆ ಒಮ್ಮೆಲೇ ವಾಹನದ ಎದುರು ಬಂದು ದಾಳಿ ಮಾಡಿತು. ವಾಹನದಲ್ಲಿದ್ದವರೆಲ್ಲ ತಕ್ಷಣ ಇಳಿದು ಓಡಿ ಹೋದರು. ಆಕ್ರೋಶಗೊಂಡ ಆನೆ ವಾಹನವನ್ನು ನಜ್ಜುಗುಜ್ಜು ಮಾಡಿ ಸ್ಥಳದಿಂದ ಕಾಲ್ಕಿತ್ತಿದೆ. ವಾಹನ ನೋಡಿ ಆನೆ ರೊಚ್ಚಿಗೆದ್ದಿರಬಹುದು. ಆನೆ ದಾಳಿಯಿಂದ ವಾಹನ ಜಖಂಗೊಂಡಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಭಯಾರಣ್ಯದ ಅರಣ್ಯ ಸಂರಕ್ಷಣಾ ಧಿಕಾರಿ ಧನಂಜಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next