Advertisement

ಬಿಸಿಲೆ ಘಾಟಿ : ಮಧ್ಯ ರಾತ್ರಿ ಕಾಡಾನೆ ದಾಳಿ, ಇಬ್ಬರು ಬಚಾವ್

10:49 AM Oct 30, 2018 | Team Udayavani |

ಸುಬ್ರಹ್ಮಣ್ಯ : ಇಲ್ಲಿನ ಬಿಸಿಲೆ ಘಾಟಿಯ ಕುಲ್ಕುಂದ ಗೇಟಿನ ಬಳಿ ವಾಹನದ ಮೇಲೆ ಕಾಡಾನೆ ದಾಳಿ ಮಾಡಿದ್ದು, ವಾಹನದಲ್ಲಿದ್ದ ಇಬ್ಬರು ಅಪಾಯದಿಂದ ಪಾರಾದ ಘಟನೆ ಮಂಗಳವಾರ ನಸುಕಿನ ವೇಳೆ  ನಡೆದಿದೆ. 

Advertisement

ಸೋಮವಾರಪೇಟೆ ಮೂಲದ ಹಮೀದ್ ಮತ್ತು ಅಬ್ದುಲ್ ಸಲೀಂ ಆನೆ ದಾಳಿಗೆ ಒಳಗಾಗಿ ಪರಾರಿಯಾದವರು.

ಇವರಿಬ್ಬರು ಸೋಮವಾರಪೇಟೆಯಿಂದ  ಹಸಿ ಮೀನು ತರಲು ಮಂಗಳೂರಿಗೆ ಬರುತ್ತಿದ್ದರು. ಕುಲ್ಕುಂದ ದೇವರ ಗುಡ್ಡ ಬಳಿ ಬರುವಾಗ ತಿರುವಿನಲ್ಲಿ ಕಾಡಾನೆ ಮರಿ ಸಹಿತವಾಗಿ ಇವರ ಮಹಿಂದ್ರಾ ಜೀತೊ ವಾಹನದ ಮೇಲೆ ದಾಳಿ ಮಾಡಿದೆ. ವಾಹನದ ಮುಂಭಾಗದ ಕನ್ನಡಿಯ ಮೇಲೆ ಆನೆ ಸೊಂಡಿಲಿನ ಪ್ರಹಾರ ನಡೆಸಿದೆ. ಕನ್ನಡಿ ಪುಡಿ ಪುಡಿಯಾಗಿದೆ.ಆ ವೇಳೆ ಆನೆಯ ಮರಿ ಕೂಗಿದ್ದರಿಂದ ಆನೆ ವಾಹನ ಬಿಟ್ಟು ಕಾಡು ಸೇರಿದೆ. 

ದಾರಿಯಲ್ಲಿ ಬರುತ್ತಿದ್ದ ಬೇರೊಂದು ವಾಹನವೇರಿ ಹಮೀದ್ ಮತ್ತು ಸಲೀಮ್ ಅಲ್ಲಿಂದ ಮಂಗಳೂರು ತಲುಪಿದ್ದಾರೆ . ಬೆಳಿಗ್ಗೆ ವಾಹನವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆ ಗೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next