Advertisement

Manjeshwar ವಿದ್ಯುತ್‌ ಆಘಾತ: ಯುವಕ ಸಾವು

12:30 AM Mar 23, 2024 | Team Udayavani |

ಕುಂಬಳೆ: ಮಂಜೇಶ್ವರ ಹೊಸಂಗಡಿ ಬಳಿಯ ಆಂಗಡಿಪದವಿನಲ್ಲಿ ವಿದ್ಯುತ್‌ ಆಘಾತದಿಂದ ಯುವಕನೋರ್ವ ಸಾವಿಗೀಡಾಗಿದ್ದಾರೆ.

Advertisement

ಸ್ಥಳೀಯ ದಿ| ಅಶೋಕ್‌ ಅವರ ಪುತ್ರ ಪ್ರಜ್ವಲ್‌ (19) ಅಂಗಡಿ ಯೊಂದರ ಮುಂಭಾಗದಲ್ಲಿ ವಿದ್ಯುತ್‌ ಹರಿಯುತ್ತಿದ್ದ ಕಬ್ಬಿಣದ ಗೇಟನ್ನು ಸ್ಪರ್ಶಿಸಿದಾಗ ಆಘಾತಕ್ಕೊಳಗಾಗಿ ಕೂಗಿದರು.

ಆಗ ಸ್ಥಳೀಯರು ಬಂದು ವಿದ್ಯುತ್‌ ತಂತಿಯನ್ನು ಬೇರ್ಪಡಿಸಿ, ಉಪ್ಪಳ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವಿಗೀಡಾಗಿದ್ದಾರೆ. ಪ್ರಜ್ವಲ್‌ ತೈಲ ಮಾರಾಟದ ಅಂಗಡಿಯಲ್ಲಿ ದುಡಿಯುತ್ತಿದ್ದು ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next