Advertisement

ಚರಂಡಿಯಲ್ಲಿ ವಿದ್ಯುತ್‌ ಕಂಬ ಅಳವಡಿಸಿದ ಮೆಸ್ಕಾಂ

12:30 AM May 15, 2019 | sudhir |

ಅಜೆಕಾರು: ಕಾರ್ಕಳ ಪುರಸಭೆ ವ್ಯಾಪ್ತಿಯ ಭಾರತ್‌ ಬೀಡಿ ಕಾಲನಿಯಲ್ಲಿ ಮೆಸ್ಕಾಂ ಇಲಾಖೆಯವರು ನೀರು ಹರಿಯುವ ಚರಂಡಿಯ ನಡುವೆ ವಿದ್ಯುತ್‌ ಕಂಬ ಅಳವಡಿಸಿದ್ದು, ಇದೀಗ ಸ್ಥಳಿಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಕಾಲನಿಯಲ್ಲಿ ಹಳೆ ವಿದ್ಯುತ್‌ ಕಂಬದ ಹತ್ತಿರ ಕಟ್ಟಡ ನಿರ್ಮಾಣಗೊಂಡಿದೆ. ಆ ಕಟ್ಟಡಕ್ಕೆ ವಿದ್ಯುತ್‌ ಕಂಬ ತೀರ ಹತ್ತಿರದಲ್ಲಿದ್ದು ಅಪಾಯ ಸಂಭಂವಿಸುವ ಸಾಧ್ಯತೆಗಳನ್ನು ಮನಗಂಡ ಮೆಸ್ಕಾಂ ಇಲಾಖೆಯವರು ಈಗ ಹೊಸ ಕಂಬವನ್ನು ಅಳವಡಿಸಿದ್ದಾರೆ.

ಆದರೆ ಹೊಸ ಕಂಬವನ್ನು ಮಳೆಗಾಲದಲ್ಲಿ ಮಳೆ ನೀರು ಹರಿಯುವ ಚರಂಡಿಯ ನಡುವೆ ಅಳವಡಿಸಿರುವುದರಿಂದ ಆ ಪರಿಸರದ ಮನೆಗಳ ಒಳಗೆ ಮಳೆ ನೀರು ನುಗ್ಗುವ ಸಂಭವ ಹೆಚ್ಚಾಗಿದೆ.

ಮುಂದಿನ ದಿನಗಳಲ್ಲಿ ಸ್ಥಳಿಯರಿಗೆ ಸಮಸ್ಯೆಗಳನ್ನು ತಂದೊಡ್ಡುವ ಸಂಭಾವ್ಯ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಆದ್ದರಿಂದ ಈ ಕೂಡಲೇ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ವಿದ್ಯುತ್‌ ಕಂಬವನ್ನು ಚರಂಡಿಯಿಂದ ತೆಗೆದು ಬೇರೆಡೆ ಹಾಕುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next