Advertisement
ನಿಯಮದಂತೆ ಹಾಲಿ ಆಯುಕ್ತರ ಅವಧಿ ಮುಗಿಯುವ ಕೆಲವು ದಿನಗಳ ಮುಂಚಿತವಾಗಿ ನೂತನ ಆಯುಕ್ತರ ನೇಮಕಕ್ಕೆ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ಮುಖ್ಯಮಂತ್ರಿಗೆ ಕಳುಹಿಸಿಕೊಡಬೇಕು. ಬಳಿಕ ಅದನ್ನು ರಾಜ್ಯಪಾಲರು ಅನುಮೋದಿಸಿ ನೇಮಕಾತಿ ಆದೇಶ ಹೊರಡಿಸುತ್ತಾರೆ. ಇಲ್ಲಿಯವರೆಗೆ ಪ್ರಕ್ರಿಯೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಕರ್ನಾಟಕದ ಮೂಲದ ನಿವೃತ್ತ ಐಎಎಸ್ ಅಧಿಕಾರಿಗಳನ್ನು ರಾಜ್ಯ ಚುನಾವಣ ಆಯುಕ್ತರನ್ನಾಗಿ ನೇಮಿಸಲಾಗುತ್ತದೆ. ಅವಧಿ ಮುಕ್ತಾಯಗೊಳ್ಳುವುದೊರಳಗೆ ಮತ್ತೂಬ್ಬರ ನೇಮಕವಾಗುತ್ತದೆ. ಆದರೆ ಕೆಲವೊಮ್ಮೆ ಆಯುಕ್ತರ ಹುದ್ದೆಯನ್ನು ಖಾಲಿ ಇಟ್ಟದ್ದೂ ಇದೆ. ಈ ಹಿಂದಿನ ಆಯುಕ್ತರ ಅವಧಿ ಮುಗಿದು 5 ತಿಂಗಳ ಬಳಿಕ ಡಾ| ಬಸವರಾಜು ಅವರನ್ನು ಸರಕಾರ ನೇಮಿಸಿತ್ತು. ಅವರಿಲ್ಲದೆ ದೈನಂದಿನ ಆಡಳಿತಾತ್ಮಕ ವಿಷಯಗಳನ್ನು ಆಯೋಗದ ಕಾರ್ಯದರ್ಶಿ ನಿರ್ವಹಿಸಬಹುದು. ಆದರೆ ಚುನಾವಣೆಗಳ ಘೋಷಣೆ ಮತ್ತು ನಿರ್ವಹಣೆಗೆ ಆಯುಕ್ತರು ಇರಬೇಕು.