Advertisement
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಕಾರ್ಯಕ್ಕೆ ನಿಯೋ ಜಿತರಾದ ವಿವಿಧ ನೋಡಲ್ ಅಧಿಕಾರಿಗಳ ಮತ್ತು ಸಮಿತಿಗಳ ಸಭೆಯಲ್ಲಿ ಮಾತನಾಡಿದರು.
ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸಭೆ ಸಮಾರಂಭಗಳಿಗೂ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಚುನಾವಣಾ ಸಭೆ ಆರಂಭವಾಗುವುದಕ್ಕಿಂತ ಒಂದು ಗಂಟೆ ಮುಂಚೆಯೇ ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿಗೆ ಬಂದು ನಿಗಾ ಇಡಬೇಕು. ಸಮಾರಂಭದಲ್ಲಿ ಬಳಸುವ ಕುರ್ಚಿ, ವೇದಿಕೆ, ಧ್ವನಿವರ್ಧಕ, ಶಾಮಿಯಾನ, ವಾಹನಗಳು, ತಿಂಡಿ ತಿನಿಸು ಸೇರಿದಂತೆ ಪ್ರತಿಯೊಂದು ವೆಚ್ಚವನ್ನೂ ಚುನಾವಣಾ ಆಯೋಗ ನಿಗದಿಪಡಿಸಿದ ದರದಂತೆ ಅಭ್ಯರ್ಥಿಯ ವೆಚ್ಚ ಲೆಕ್ಕಕ್ಕೆ ಸೇರಿಸಬೇಕಿದೆ ಎಂದು ಅವರು ತಿಳಿಸಿದರು. ಒಂದು ಗಂಟೆ ಮುಂಚೆ ಧ್ವಜ ಕೂಡದು
ಆಅಭ್ಯರ್ಥಿಗಳು ಅಥವಾ ಅವರ ಪರ ಹಾಕುವ ಬ್ಯಾನರ್, ಫ್ಲೆಕ್ಸ್, ಹೋರ್ಡಿಂಗ್ಗಳಿಗೆ ಅನುಮತಿ ಪಡೆ ಯಲೇಬೇಕು. ಅನುಮತಿ ನೀಡಿದ ಗಾತ್ರಕ್ಕಿಂತ ಒಂಚೂರು ವ್ಯತ್ಯಾಸ ಕಂಡುಬಂದರೂ ಪರವಾನಿಗೆಯ ಉಲ್ಲಂಘನೆ ಎಂದೇ ತಿಳಿದು ಕ್ರಮ ಕೈಗೊಳ್ಳಲಾಗುವುದು. ಸಭೆ ಆರಂಭವಾಗುವ ಒಂದು ಗಂಟೆಗಿಂತ ಮೊದಲು ಅಲ್ಲಿ ಪಕ್ಷಗಳ ಧ್ವಜಗಳನ್ನು ಹಾಕುವಂತಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಚುನಾವಣೆ ಸಂದರ್ಭ ನಡೆಯುವ ಯಾವುದೇ ಉತ್ಸವ ಅಥವಾ ಜಯಂತಿ ಕಾರ್ಯಕ್ರಮಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಗಮನಹರಿಸ ಬೇಕು ಎಂದು ತಿಳಿಸಿದರು.
Related Articles
Advertisement