Advertisement

ಚುನಾವಣೆ ಬಳಿಕ ಗ್ರಾ.ಪಂ. ಮಟ್ಟದಲ್ಲಿ ಅಹವಾಲು ಸ್ವೀಕಾರ: ಎಚ್‌ಡಿಕೆ

10:23 PM Apr 07, 2019 | sudhir |

ಉಡುಪಿ: ಚುನಾವಣೆ ಬಳಿಕ ತಿಂಗಳಿಗೆ ಹತ್ತು ದಿನವಾದರೂ ಗ್ರಾ.ಪಂ. ಮಟ್ಟದಲ್ಲಿ ಅಧಿಕಾರಿಗಳನ್ನು ಕರೆದೊಯ್ದು ಜನರ ಅಹವಾಲು ಸ್ವೀಕರಿಸಲಿದ್ದೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ರವಿವಾರ ಭೇಟಿ ನೀಡಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 12 ವರ್ಷಗಳ ಹಿಂದೆ ನಾನಿದನ್ನು ಮಾಡಿದ್ದೆ. ಚುನಾವಣೆ ಬಳಿಕ ಅದೇ ಪ್ರಯೋಗವನ್ನು ಮತ್ತೆ ನಡೆಸುತ್ತೇನೆ ಎಂದರು.

ಕರಾವಳಿ ಮೈತ್ರಿ ಮಾದರಿ
ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಇದನ್ನು ಬಗೆಹರಿಸಿಕೊಂಡು 22-23 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ. ಉಡುಪಿ ಚಿಕ್ಕಮಗಳೂರು, ದ.ಕ., ಉ.ಕ. ಜಿಲ್ಲೆಗಳಲ್ಲಿ ಯಾವುದೇ ಗೊಂದಲಗಳಿಲ್ಲ.

ಇಂತಹ ಮೈತ್ರಿ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಕರಾವಳಿ ಭಾಗದಲ್ಲಿ ಜೆಡಿಎಸ್‌ ಪಕ್ಷದ ಶಕ್ತಿ ಇಲ್ಲ. ಇಲ್ಲಿ ಗೆಲ್ಲಬೇಕಾದರೆ ಕಾಂಗ್ರೆಸ್‌ನವರು ಸಹಾಯ ಮಾಡಬೇಕು ಎಂದರು.

13 ಪಕ್ಷಗಳು ಕಿಚಡಿ ಅಲ್ಲವೆ?
ಬಿಜೆಪಿಯವರು ವಿರೋಧ ಪಕ್ಷಗಳನ್ನು ಕಿಚಡಿ ಪಕ್ಷ ಎನ್ನುತ್ತಾರೆ. ಹಾಗಿದ್ದರೆ ಇವರೇಕೆ 13 ಪಕ್ಷಗಳನ್ನು ಸೇರಿಸಿಕೊಂಡು ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದರು. ಧರ್ಮದ ಹೆಸರಿನಲ್ಲಿ ಬಿಜೆಪಿಯವರು ಅಂತರ ಸೃಷ್ಟಿಸಿ ಲಾಭ ಪಡೆಯುತ್ತಿದ್ದಾರೆ? ಇವರಿಂದ ಕರಾವಳಿಗೆ ಏನು ಕೊಡುಗೆ ಇದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಪಾಕಿಸ್ಥಾನದ ಜತೆ ಸಂಘರ್ಷ, ಆಂತರಿಕ ಸಂಘರ್ಷವೂ ಇದ್ದಿರಲಿಲ್ಲ ಎಂದರು.

Advertisement

ಕಾಂಗ್ರೆಸ್‌- ಜೆಡಿಎಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌, ಕಾಂಗ್ರೆಸ್‌ ನಾಯಕರಾದ ಆಸ್ಕರ್‌ ಫೆರ್ನಾಂಡಿಸ್‌, ಬ್ಲೋಸಂ ಫೆರ್ನಾಂಡಿಸ್‌, ಸಚಿವೆ ಡಾ|ಜಯಮಾಲಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕಕುಮಾರ್‌ ಕೊಡವೂರು, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಯೋಗೀಶ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯರಾದ ಬಿ.ಎಂ.ಫಾರೂಕ್‌, ಎಸ್‌.ಎಲ್‌.ಭೋಜೇಗೌಡ, ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕರಾದ ಯು.ಆರ್‌.ಸಭಾಪತಿ, ಎಚ್‌.ಗೋಪಾಲ ಭಂಡಾರಿ, ನಾಯಕ ರಾಕೇಶ್‌ ಮಲ್ಲಿ ಮೊದಲಾದವರು ಉಪಸ್ಥಿತರಿದ್ದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫ‌ೂರ್‌ ಕಾರ್ಯಕ್ರಮ ನಿರ್ವಹಿಸಿದರು.

ಮೊದಲ ಭೇಟಿ
ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಭವನಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next