Advertisement

Election Update: ಪರಂ ಕಾಲಿಗೆರಗಿದ ಬಿ.ವೈ. ವಿಜಯೇಂದ್ರ

11:02 PM Apr 14, 2023 | Team Udayavani |

ಕುಣಿಗಲ್‌: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೆಪಿಸಿಸಿ ಮಾಜಿ ಅಧ್ಯಕ್ಷ, ಶಾಸಕ ಡಾ| ಜಿ.ಪರಮೇಶ್ವರ್‌ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಪರೂಪದ ಪ್ರಸಂಗ ತಾಲೂಕಿನ ಎಡಿಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ಶುಕ್ರವಾರ ನಡೆಯಿತು.

Advertisement

ಈ ಬಾರಿ ಕೊರಟಗೆರೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪರಮೇಶ್ವರ್‌ ಅವರು ಎಡಿಯೂರಿಗೆ ಆಗಮಿಸಿ ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ದೇವಾಲಯಕ್ಕೆ ಆಗಮಿಸಿದ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ತಮ್ಮ ಮನೆ ದೇವರಾದ ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ದೇವಾಲಯದ ಮುಂಭಾಗ ಪರಮೇಶ್ವರ್‌ ಹಾಗೂ ವಿಜಯೇಂದ್ರ ಮುಖಾಮುಖೀಯಾದರು. ಉಭಯ ಕುಶಲೋಪರಿಯ ಬಳಿಕ ಪರಮೇಶ್ವರ್‌ ಅವರು ವಿಜಯೇಂದ್ರ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಸಮ್ಮಾನಿಸಿದರು. ಆಗ ವಿಜಯೇಂದ್ರ ಅವರು ಪರಮೇಶ್ವರ್‌ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next