Advertisement

ವೋಟರ್ ಐಡಿಗೂ ಆಧಾರ್ ಲಿಂಕ್- ಮಸೂದೆಗೆ ಅಂಕಿತ: ಈ ಕಾಯ್ದೆಯಿಂದ ಎಷ್ಟು ಉಪಯೋಗ?

03:44 PM Dec 20, 2021 | Team Udayavani |

ನವದೆಹಲಿ: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೋಮವಾರ (ಡಿಸೆಂಬರ್ 20) ಮತದಾರರ ಗುರುತು ಚೀಟಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಚುನಾವಣಾ ಕಾನೂನು(ತಿದ್ದುಪಡಿ) ಮಸೂದೆ, 2021 ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

Advertisement

ಇದನ್ನೂ ಓದಿ:ಲೈಂಗಿಕ ಕಿರುಕುಳ ಕೇಸ್: ತಲೆಮರೆಸಿಕೊಂಡಿದ್ದ ನ್ಯಾಯವಾದಿ ರಾಜೇಶ್ ಕೋರ್ಟ್ ಗೆ ಶರಣು

“ಆಧಾರ್ ಎಂಬುದು ನಿವಾಸದ ದಾಖಲೆಯಾಗಿದೆ ವಿನಃ, ಅದು ಪೌರತ್ವದ ಪುರಾವೆ ಅಲ್ಲ. ಒಂದು ವೇಳೆ ನೀವು ಮತದಾರನ ಬಳಿ ಆಧಾರ್ ಕಡ್ಡಾಯ ಎಂದು ಹೇಳಿದ್ರೆ, ಅದು ಅವರು ವಾಸವಾಗಿರುವುದಕ್ಕೆ ದೊರೆತ ದಾಖಲೆಯಾಗಲಿದೆ. ಇದರಿಂದಾಗಿ ನೀವು(ಕೇಂದ್ರ ಸರ್ಕಾರ) ಈ ದೇಶದ ಪ್ರಜೆಯಲ್ಲದವರಿಗೂ ಮತದಾನದ ಹಕ್ಕನ್ನು ಕೊಟ್ಟಂತಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಲೋಕಸಭೆಯಲ್ಲಿ ತಿಳಿಸಿದ್ದರು.

ಕೇಂದ್ರ ಸರ್ಕಾರದ ವಾದವೇನು?

ಈ ವಿಧೇಯಕದಿಂದ ದೇಶದಲ್ಲಿನ ನಕಲಿ ಮತದಾನ ಕೊನೆಗೊಳ್ಳಲಿದೆ. ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ವಿಶ್ವಾಸಾರ್ಹಗೊಳಿಸಲಿದೆ ಎಂದು ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

Advertisement

ಈ ಕಾಯ್ದೆಯ ಪ್ರಕಾರ, ಮತದಾರನ ಗುರುತು ಪತ್ತೆಗಾಗಿ, ಯಾರು ಮತದಾರರಾಗಿ ನೋಂದಾಯಿಸಲು ಬರುವ ಜನರ ಆಧಾರ ಸಂಖ್ಯೆಯನ್ನು ಪಡೆಯಲು ಚುನಾವಣಾ ನೋಂದಣಾಧಿಕಾರಿಗೆ ಅವಕಾಶ ನೀಡುತ್ತದೆ. ಆದರೆ ವಿಪಕ್ಷಗಳ ಆರೋಪಗಳು ಆಧಾರ ರಹಿತವಾದದ್ದು ಎಂದು ರಿಜಿಜು ಹೇಳಿದರು.

ವಿರೋಧ ಪಕ್ಷಗಳು ಈ ವಿಧೇಯಕದ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದೆ. ಈ ಕಾನೂನಿನಿಂದಾಗಿ ಚುನಾವಣಾ ಪ್ರಕ್ರಿಯೆ ಇನ್ನಷ್ಟು ಸದೃಢಗೊಳ್ಳಲಿದೆ ಎಂದು ಹೇಳಿದರು. ಅಷ್ಟೇ ಅಲ್ಲ ಚುನಾವಣಾ ಸಂದರ್ಭದಲ್ಲಿ ನಕಲಿ ಮತದಾನವನ್ನು ತಡೆಯುವ ಪ್ರಯತ್ನ ಇದಾಗಿದೆ. ಅಲ್ಲದೇ ಇದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಅನುಗುಣವಾಗಿದೆ ಎಂದು ರಿಜಿಜು ಹೇಳಿದರು.

ಆಧಾರ್ ಲಿಂಕ್ ಆದ್ರೆ..ಹಲವರು ಮತದಾನದಿಂದ ವಂಚಿತ: ಒವೈಸಿ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ. ಅಷ್ಟೇ ಅಲ್ಲ ನಾಗರಿಕರ ಹಕ್ಕನ್ನೂ ಮೊಟಕುಗೊಳಿಸುತ್ತಿದೆ. ಆಧಾರ್ ಕಾರ್ಡ್ ನಲ್ಲಿ ಶೇ.8ರಷ್ಟು ವ್ಯತ್ಯಾಸ ಕಂಡು ಬಂದಿದ್ದು, ಮತದಾರರ ಪಟ್ಟಿಯಲ್ಲಿ ಶೇ.3ರಿಂದ ರಷ್ಟು ದೋಷಗಳು ಪತ್ತೆಯಾಗಿದೆ. ಒಂದು ವೇಳೆ ಈ ಮಸೂದೆ ಅಂಗೀಕಾರಗೊಂಡರೆ ಈ ದೇಶದಲ್ಲಿ ಬಹುಸಂಖ್ಯೆಯ ಜನರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ ಎಂದು ಒವೈಸಿ ಎನ್ ಡಿಟಿವಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next