Advertisement

Mangaluru ಚುನಾವಣ ಕರ್ತವ್ಯ: ಜಿಲ್ಲಾಧಿಕಾರಿ ಸೂಚನೆ

11:47 PM Dec 13, 2023 | Team Udayavani |

ಮಂಗಳೂರು: ಚುನಾವಣ ಆಯೋಗ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಚೆನ್ನಾಗಿ ಓದಿಕೊಂಡು ಆ ರೀತಿ ಕಾರ್ಯನಿರ್ವಹಿಸ ಬೇಕು. ಚುನಾವಣ ಅಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಆಯೋಗ ಸ್ಪಷ್ಟವಾಗಿ ತಿಳಿಸಿದೆ.

Advertisement

ಅದರಂತೆ ಪ್ರತಿಯೊಬ್ಬರು ಆಯಾ ಗಡುವನ್ನು ಕಾಯದೆ ಕೂಡಲೇ ತಮ್ಮ ಕರ್ತವ್ಯಗಳನ್ನು ನಿರ್ವಹಿಸ ಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಲೋಕಸಭಾ ಚುನಾವಣ ಪೂರ್ವಸಿದ್ಧತೆಯ ಭಾಗವಾಗಿ ನಿರ್ಣಾಯಕ ಮತಗಟ್ಟೆಗಳ ಗುರುತಿಸುವಿಕೆ ಬಗ್ಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಗಡಿ ಪ್ರದೇಶಗಳಾದ ಸುಳ್ಯ ಹಾಗೂ ಈಶ್ವರಮಂಗಲ, ತಲಪಾಡಿ, ಬಂಟ್ವಾಳ, ಬೆಳ್ತಂಗಡಿಯಲ್ಲಿ ಚೆಕ್‌ಪೋಸ್ಟ್‌ ತೆರೆಯ ಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next