Advertisement

ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಗೋ ಸಾಕಣೆ ಕಡ್ಡಾಯ ಮಾಡಿ

09:32 PM Aug 16, 2021 | Team Udayavani |

ಭೋಪಾಲ:  ಸಚಿವ ಹರ್‌ದೀಪ್‌ ಸಿಂಗ್‌ ದಾಂಗ್‌ ಇನ್ನು ಮುಂದಿನ ದಿನಗಳಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದರೆ ಗೋವುಗಳನ್ನು ಸಾಕುವುದನ್ನು ಕಡ್ಡಾಯಗೊಳಿಸಿ, ಚುನಾವಣಾ ಆಯೋಗ ಆದೇಶ ಹೊರಡಿಸಬೇಕು. ಹೀಗೆಂದು ಮಧ್ಯಪ್ರದೇಶದ ಪರಿಸರ ಮತ್ತು ನವೀಕರಿಸಬಹುದಾದ ಇಂಧನಗಳ ಸಚಿವ ಹರ್‌ದೀಪ್‌ ಸಿಂಗ್‌ ದಾಂಗ್‌ ಸಲಹೆ ಮಾಡಿದ್ದಾರೆ. ಗೋ ಸಾಕಣೆ ಮಾಡದ ಸ್ಪರ್ಧಾಕಾಂಕ್ಷಿಗಳ ನಾಮಪತ್ರವನ್ನು ರದ್ದು ಮಾಡಬೇಕು ಎಂದು ಹೇಳಿದ್ದಾರೆ.

Advertisement

ಇದರ ಜತೆಗೆ ಪ್ರತಿ ತಿಂಗಳು 25 ಸಾವಿರ ರೂ.ಗಳಿಗಿಂತ ಹೆಚ್ಚು ಸಂಬಳ ಪಡೆಯುತ್ತಿರುವ ರಾಜ್ಯ ಸರ್ಕಾರಿ ಉದ್ಯೋಗಿಯ ಬಳಿಯಿಂದ ಗೋ ರಕ್ಷಣೆಗಾಗಿ 500 ರೂ. ಸಂಗ್ರಹಿಸುವ ಉದ್ದೇಶವೂ ಇದೆ ಎಂದು ಹೇಳಿದ್ದಾರೆ. “ಪಿಟಿಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು, ಕೇವಲ ವೈಯಕ್ತಿಕ ನೆಲೆಯಲ್ಲಿ ಈ ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next