Advertisement

ನೀತಿ ಸಂಹಿತೆ ಜಾರಿಗೆ ಆಯೋಗದ “ಭದ್ರ ಜಾಲ

02:10 AM Mar 15, 2019 | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಈಗಾಗಲೇ ರಾಜ್ಯಾದ್ಯಂತ “ಮಾದರಿ ನೀತಿ ಸಂಹಿತೆ’ ಜಾರಿಗೆ ಬಂದಿದ್ದು, ಅದರ ಅನುಷ್ಠಾನಕ್ಕಾಗಿ ಚುನಾವಣಾ ಆಯೋಗವು ವಿವಿಧ ತಂಡಗಳ “ಭದ್ರ ಜಾಲ’ ಹೆಣೆದಿದೆ.

Advertisement

ರಾಜ್ಯದಲ್ಲಿ ಏಪ್ರಿಲ್‌ 18 ಹಾಗೂ 23ಕ್ಕೆ 2 ಹಂತಗಳಲ್ಲಿ  ಮತದಾನ ನಡೆಯಲಿದ್ದು, ಈಗಾಗಲೇ ಮಾ.10ರಿಂದಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಈ ಮಾದರಿ ನೀತಿ ಸಂಹಿತೆಯ ಅನುಷ್ಠಾನಕ್ಕೆ ಆದಾಯ ತೆರಿಗೆ, ಅಬಕಾರಿ, ಕಂದಾಯ ಹಾಗೂ ಪೊಲೀಸ್‌ ಇಲಾಖೆಗಳನ್ನೊಳಗೊಂಡ ವಿವಿಧ ಇಲಾಖೆಗಳ ತಂಡಗಳನ್ನು ರಚಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೀತಿ ಸಂಹಿತೆ ಜಾರಿಗೆ 1,512 ಫ್ಲೈಯಿಂಗ್‌ ಸ್ಕ್ವಾಡ್‌, 1,837 ಸ್ಟಾಟಿಕ್‌ ಸರ್ವೆಲೆನ್ಸ್‌ ತಂಡಗಳನ್ನು ರಚಿಸಲಾಗಿದ್ದು, 232 ಸಹಾಯಕ ಚುನಾವಣಾ ವೆಚ್ಚ ವೀಕ್ಷಕರು, 257 ಅಕೌಂಟಿಂಗ್‌ ತಂಡಗಳು ನೇಮಕ ಮಾಡಲಾಗಿದೆ. 726 ಪೊಲೀಸ್‌ ನಾಕಾಗಳು, 331 ವಿವಿಟಿ ತಂಡಗಳು ಹಾಗೂ 694 ವಿಎಸ್‌ಟಿ ತಂಡಗಳನ್ನು ರಚಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಇಲ್ಲಿವರೆಗೆ ಸಾರ್ವಜನಿಕ ಆಸ್ತಿಗಳ ಮೇಲಿನ 23, 854 ಗೋಡೆಬರಹ, 89,688 ಪೋಸ್ಟರ್‌, 52,704 ಬ್ಯಾನರ್‌, 26 ಸಾವಿರ ಇತರೆ ವಸ್ತುಗಳ ಸೇರಿ 1..92 ಲಕ್ಷ ವಸ್ತುಗಳನ್ನು ತೆರವುಗೊಳಿಸಲಾಗಿದ್ದು, 2 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಅದೇ ರೀತಿ ಖಾಸಗಿ ಆಸ್ತಿಗಳ ಮೇಲಿನ 8,372 ಗೋಡೆ ಬರಹ, 38,325 ಪೋಸ್ಟರ್‌, 19,409 ಬ್ಯಾನರ್‌, 9 ಸಾವಿರ ಇತರೆ ವಸ್ತುಗಳ ಸೇರಿ 75,552 ವಸ್ತುಗಳನ್ನು ತೆರವುಗೊಳಿಸಲಾಗಿದೆ. 30.10 ಲಕ್ಷ ನಗದು ಮತ್ತು 4 ಕೋಟಿ ಮೌಲ್ಯದ 73 ಸಾವಿರ ಲೀಟರ್‌ ಮದ್ಯ ಜಪ್ತಿ ಮಾಡಲಾಗಿದೆ ಎಂದರು.

42 ಸಾವಿರ  ಶಸ್ತ್ರಾಸ್ತ್ರಗಳ ಠೇವಣಿ

ಚುನಾವಣೆ ಹಿನ್ನೆಲೆಯಲ್ಲಿ ಪರವಾನಗಿ ಹೊಂದಿದ ಶಸ್ತ್ರಾಸ್ತ್ರಗಳನ್ನು ಠೇವಣಿಇರಿಸಿಕೊಳ್ಳುವ (ಡಿಪಾಸಿಟ್‌) ಕಾರ್ಯವನ್ನು ಜನವರಿ ತಿಂಗಳಿಂದ ಆರಂಭಿಸಲಾಗಿದ್ದು, ಇಲ್ಲಿತನಕ 42,498 ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿಕೊಳ್ಳಲಾಗಿದೆ.

Advertisement

ಸಿಆರ್‌ಪಿಸಿ ಅಡಿಯಲ್ಲಿ 28,380 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು,16,462 ಮುಚ್ಚಳಿಕೆಗಳನ್ನು ಬರೆಸಿಕೊಳ್ಳಲಾಗಿದೆ. 6,378 ಜಾಮೀನು ತಹಿತ ವಾರಂಟ್‌ಗಳನ್ನು ಹೊರಡಿಸಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ತೊಂದರೆ ಕೊಡಬಹುದು ಎಂಬಂಥ 34,679 ಮಂದಿಯನ್ನು ಗುರುತಿಸಲಾಗಿದ್ದು, ಆ ಪೈಕಿ ‌ 21 ಸಾವಿರ ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದರು.

ಹೊಸ ಯೋಜನೆ ಘೋಷಿಸುವಂತಿಲ್ಲ

ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಯಾರೇ ಆಗಲಿ ಸರ್ಕಾರದ ಪರವಾಗಿ ಹೊಸ ಯೋಜನೆಗಳನ್ನು ಘೋಷಿಸುವಂತಿಲ್ಲ, ನೀತಿ ನಿರೂಪಕ ವಿಚಾರಗಳ ಬಗ್ಗೆ ಭರವಸೆ ನೀಡುವಂತಿಲ್ಲ. ಯಾರಾದರೂ ಆ ರೀತಿ ಮಾಡಿದರೆ ಅದನ್ನು ಆಯೋಗ ಗಂಭೀರವಾಗಿ ಪರಿಗಣಿಸಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಹೇಳಿದ್ದಾರೆ.

ಸುದ್ದಿಗೋಷ್ಠಿ ವೇಳೆ “ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಜೂನ್‌ ತಿಂಗಳಲ್ಲಿ ಇಲ್ಲಿಗೆ ಬಂದು ಯೋಜನೆ ಉದ್ಘಾಟಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ’ ಇದು ನೀತಿಸಂಹಿತೆ ಉಲ್ಲಂಘ ನೆ ಆಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next