Advertisement

Election 2023: ಗ್ರಾಮ್‌ ಕೀ ಬಾತ್‌ –ಹಳ್ಳಿಕಟ್ಟೆಯಲ್ಲೂ ಹಾಲಾಡಿ ಹಾಲಾಡಿ ಹಾಲಾಡಿ..

11:34 PM Apr 05, 2023 | Team Udayavani |

ಕುಂದಾಪುರ: ಎಲ್ಲೆಡೆ ರಾಜ್ಯ ವಿಧಾನಸಭೆಯ ಚುನಾವಣೆಯ ಕಾವು ಜೋರು. ರಾಜಕೀಯ ಚಟುವ ಟಿಕೆಗಳು ನಿಧಾನಕ್ಕೆ ಬಿರುಸು ಪಡೆಯುತ್ತಿವೆ. ಕುಂದಾಪುರ, ಬೈಂದೂರು ಭಾಗದಲ್ಲಂತೂ ಎಲ್‌ ಕಂಡ್ರೂ ಈಗ ಹಾಲಾಡಿ ಬಗೆಯದ್ದೇ ಮಾತು, ಚರ್ಚೆ.

Advertisement

ಕುಂದಾಪುರದಿಂದ 5 ಬಾರಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಚುನಾವಣೆ ಯಲ್ಲಿ ಸ್ಪರ್ಧಿಸೋಲ್ಲ ಎಂದು ಘೋಷಿಸಿದ ಸಂಗ ತಿಯೀಗ ಹಳ್ಳಿಕಟ್ಟೆ, ಗೂಡಂಗಡಿಗಳು, ಹೊಟೇಲ್‌ಗ‌ಳು, ಕಚೇರಿ ಸಹಿತ ಎಲ್ಲೆಡೆ ಸದ್ದು ಮಾಡುತ್ತಿದೆ.

ಈ ಚುನಾವಣೆಯಲ್ಲೂ ಹಾಲಾಡಿಯವರೇ ಅಭ್ಯರ್ಥಿ ಅಂದುಕೊಂಡಿದ್ದ ಜನರಿಗೆ, ಅವರೇ ಸ್ಪರ್ಧಾ ಕಣದಿಂದ ಹಿಂದೆ ಸರಿದ‌ ಸುದ್ದಿ ಒಂದು ರೀತಿಯ
ಅಚ್ಚರಿ ತರಿಸಿದೆ. ಅವರು “ನಿಲ್ತಾರೆ ಅಂದಿದ್ರಂತೆ, ಆದರೆ ಟಿಕೆಟ್‌ ಕೊಡಲ್ಲ ಅಂದ್ರಂತೆ” ಎನ್ನುವ ಮಾತು ಒಂದೆಡೆಯಾದರೆ, “ಅವರೇ ನಿಲ್ಲುವುದಿಲ್ಲ ಎಂದು ಘೋಷಿಸಿದರಂತೆ”, “ಹಿರಿಯರಾದವರು ಕಿರಿಯರಿಗೆ ಅವಕಾಶ ಕಲ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾರೆ” ಎನ್ನುವ ಮೆಚ್ಚುಗೆಯ ಮಾತೂ ಇನ್ನೊಂದೆಡೆ ಕೇಳಿಬರುತ್ತಿದೆ. ಒಟ್ಟೂ ಪುಂಖಾನುಪುಂಖವಾಗಿ ಹಾಲಾಡಿಯವರ ಬಗೆಗಿನ ಮಾತುಗಳು ರೆಕ್ಕೆಪುಕ್ಕ ಸೇರಿಕೊಂಡು ಎಲ್ಲೆಡೆ ಹಾರುತ್ತಿವೆ.
ಈ ಚರ್ಚೆ ಯಾವುದೋ ರಾಜಕೀಯ ಪಕ್ಷಗಳ ಕಚೇರಿಗಳಿಗೆ ಮಾತ್ರ ಸೀಮಿತವಾಗಿಲ್ಲ.

ಕುಂದಾಪುರ, ಬೈಂದೂರಿನ ಹಳ್ಳಿಯಲ್ಲಿರುವ ಸಣ್ಣ ಕಟ್ಟೆಯಿಂದ ಆರಂಭವಾಗಿ, ಅಂಗಡಿಗಳು, ಹೊಟೇಲ್‌ಗ‌ಳು, ಸೆಲೂನ್‌, ಮದುವೆ ಮನೆ, ರಿಕ್ಷಾ ನಿಲ್ದಾಣಗಳಲ್ಲೂ ಮಾತುಕತೆಗಳು ಜೋರಾಗಿ ನಡೆಯುತ್ತಿವೆ. ಇಲ್ಲಿ ಟಿಕೆಟು ಯಾರಿಗೆ ಕೊಡಬಹುದು ? ಇವರು ಹೇಳಿದವರಿಗೆ ಕೊಡಬಹುದೇ? ಬೇರೆಯವರಿಗೆ ಕೊಟ್ಟರೆ ಇವರೇನು ಮಾಡುತ್ತಾರೆ? ಇವರು ನಿಲ್ಲದಿರು ವುದು ಎದುರು ಪಕ್ಷದವರಿಗೆ ಲಾಭವಾಗಬಹುದೇ? ಇದರಿಂದ ಬೈಂದೂರು ಕ್ಷೇತ್ರದ ಮೇಲೂ ಪರಿಣಾಮವುಂಟಾ? ಇತರೆ ಕಣಗಳ ಚಿತ್ರಣವೂ ಬದಲಾಗಬಹುದಾ? ಎಂಬಿತ್ಯಾದಿ ವಿಷಯಗಳ ಕುರಿತಂತೆ ಚರ್ಚೆ, ವಾಗ್ವಾದ, ಲೆಕ್ಕಾಚಾರ ಎಲ್ಲವೂ ಭರ್ಜರಿಯಾಗಿ ಚಾಲ್ತಿಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next