Advertisement

ನ್ಯಾಯಾಲಯದಲ್ಲಿ ಕುಸಿದು ಬಿದ್ದ ವೃದ್ಧೆ: ಸಕಾಲಿಕ ಚಿಕಿತ್ಸೆ ನೀಡಿದ ಜಿಲ್ಲಾಧಿಕಾರಿ

08:40 PM Jul 28, 2023 | Team Udayavani |

ದಾವಣಗೆರೆ: ನ್ಯಾಯಾಲಯದ ವಿಚಾರಣೆಗೆ ಆಗಮಿಸಿದ್ದ ವೃದ್ಧೆಯೋರ್ವಳು ಸ್ಥಳದಲ್ಲಿಯೇ ಕುಸಿದು ಬಿದ್ದಾಗ ಜಿಲ್ಲಾಧಿಕಾರಿಯವರು ಕೂಡಲೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ, ವೃದ್ಧೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಮಾನವೀಯ ಘಟನೆ ಶುಕ್ರವಾರ ನಗರದಲ್ಲಿ ಸಂಭವಿಸಿತು.

Advertisement

ಹಾವೇರಿ ಜಿಲ್ಲೆಯ 73 ವರ್ಷದ ಮುರಿಗೆಮ್ಮ ಕೋಂ. ಧರ್ಮಪ್ಪ ಎಂಬ ವೃದ್ಧೆ ವಿಚಾರಣೆಗಾಗಿ ಶುಕ್ರವಾರ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಕೋರ್ಟ್‌ಗೆ ಆಗಮಿಸಿದ್ದಳು. ವಿಚಾರಣೆಗಾಗಿ ಆಗಮಿಸಿದ್ದ ವೃದ್ಧೆ ಇದ್ದಕ್ಕಿದ್ದಂತೆ ಕೋರ್ಟ್ ಆವರಣದಲ್ಲಿಯೇ ಕುಸಿದು ಬಿದ್ದರು. ಅಲ್ಲಿಯೇ ಇದ್ದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಸ್ವತಃ ವೈದ್ಯರಾಗಿರುವುದರಿಂದ ಕೂಡಲೇ ಧಾವಿಸಿ, ವೃದ್ಧೆಯ ಆರೋಗ್ಯ ಪರಿಶೀಲಿಸಿ, ಪ್ರಥಮ ಚಿಕಿತ್ಸೆ ನೀಡಿದರು. ಚೇತರಿಸಿಕೊಂಡ ಬಳಿಕ ಆಕೆಗೆ ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next